ಕಾಸರಗೋಡು : ಕಾರು ಮರಕ್ಕೆ ಡಿಕ್ಕಿ - ಒಂದು ಸಾವು , ಆರು ಮಂದಿಗೆ ಗಾಯ
Update: 2016-03-24 11:41 GMT
ಕಾಸರಗೋಡು : ಕಾರು ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಕಾಸರಗೋಡು ನಿವಾಸಿ ಓರ್ವ ಮ್ರತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಕೋಜಿಕ್ಕೋಡ್ ನಲ್ಲಿ ನಡೆದಿದೆ.
ಮ್ರತಪಟ್ಟವರನ್ನು ವೆಸ್ಟ್ಎಳೇರಿಯ ಮಾಧವನ್ ನಾಯರ್ (64 ) ಎಂದು ಗುರುತಿಸಲಾಗಿದೆ.
ವೆಸ್ಟ್ ಎಳೇರಿ ಪಂಚಾಯತ್ ಸದಸ್ಯ ಪ್ರಮೋದ್ ( 45). ಚಿತ್ತಾರಿಕಾಲ್ ನ ರಾಮಕೃಷ್ಣ (38) , ವೇಣುಗೋಪಾಲ್ ನಾಯರ್ (60), ಪ್ರಸಾದ್ ( 30), ಶ್ರೀನಿವಾಸ್ (35), ಚಾಲಕ ಬಾಬು (35) ಗಾಯಗೊಂಡವರು .
ಇವರನ್ನು ಕೋಜಿಕ್ಕೋಡ್ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾಯೂರು ದೇವಾಸ್ಥಾನಕ್ಕೆ ತೆರಳುತ್ತಿದ್ದಾಗ ಕೊಯಿಲಾಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು.