ಕಾಸರಗೋಡು : ಕಾರು ಮರಕ್ಕೆ ಡಿಕ್ಕಿ - ಒಂದು ಸಾವು , ಆರು ಮಂದಿಗೆ ಗಾಯ

Update: 2016-03-24 11:41 GMT

ಕಾಸರಗೋಡು :   ಕಾರು ಮರಕ್ಕೆ  ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಕಾಸರಗೋಡು ನಿವಾಸಿ ಓರ್ವ ಮ್ರತಪಟ್ಟು,   ಆರು ಮಂದಿ ಗಾಯಗೊಂಡ ಘಟನೆ  ಗುರುವಾರ ಬೆಳಿಗ್ಗೆ ಕೋಜಿಕ್ಕೋಡ್ ನಲ್ಲಿ  ನಡೆದಿದೆ.

ಮ್ರತಪಟ್ಟವರನ್ನು   ವೆಸ್ಟ್ಎಳೇರಿಯ  ಮಾಧವನ್ ನಾಯರ್ (64 ) ಎಂದು ಗುರುತಿಸಲಾಗಿದೆ.

ವೆಸ್ಟ್ ಎಳೇರಿ  ಪಂಚಾಯತ್  ಸದಸ್ಯ  ಪ್ರಮೋದ್ (  45). ಚಿತ್ತಾರಿಕಾಲ್ ನ  ರಾಮಕೃಷ್ಣ (38) , ವೇಣುಗೋಪಾಲ್  ನಾಯರ್ (60), ಪ್ರಸಾದ್ ( 30), ಶ್ರೀನಿವಾಸ್ (35), ಚಾಲಕ  ಬಾಬು (35) ಗಾಯಗೊಂಡವರು .

ಇವರನ್ನು ಕೋಜಿಕ್ಕೋಡ್  ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾಯೂರು ದೇವಾಸ್ಥಾನಕ್ಕೆ ತೆರಳುತ್ತಿದ್ದಾಗ ಕೊಯಿಲಾಂಡಿ  ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.  ಸ್ಥಳೀಯರು ಗಾಯಾಳುಗಳನ್ನು  ಆಸ್ಪತ್ರೆಗೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News