ಚೆರ್ವತ್ತೂರು: ಬ್ಯಾಂಕ್ ವಿರುದ್ಧ ಗ್ರಾಹಕರ ಪ್ರತಿಭಟನೆ

Update: 2016-03-24 18:32 GMT

ಕಾಸರಗೋಡು, ಮಾ.24: ಆರು ತಿಂಗಳ ಹಿಂದೆ ಚೆರ್ವತ್ತೂರು ವಿಜಯ ಬ್ಯಾಂಕ್‌ನಲ್ಲಿ ದರೋಡೆಗೊಳಗಾಗಿದ್ದ ಚಿನ್ನಾಭರಣಗಳನ್ನು ಪತ್ತೆಹಚ್ಚಿದ್ದರೂ, ಗ್ರಾಹಕರಿಗೆ ಚಿನ್ನಾಭರಣಗಳನ್ನು ಮರಳಿಸದೆ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆಂದು ಆರೋಪಿಸಿ ಗ್ರಾಹಕರು ಬ್ಯಾಂಕ್‌ನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

 ಗ್ರಾಹಕರಿಗೆ ಚಿನ್ನದ ಬೆಲೆಯ ಜೊತೆಗೆ ಶೇ.10 ಅಧಿಕ ಹಣವನ್ನು ನೀಡುವುದಾಗಿ ಬ್ಯಾಂಕ್ ಅಧಿಕಾರಿಗಳು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಮುಂದಕ್ಕೂ ನಿರ್ಲಕ್ಷ ತೋರಿದಲ್ಲಿ, ವಿಜಯ ಬ್ಯಾಂಕ್‌ನ ಕೋಝಿಕ್ಕೋಡ್ ಮತ್ತು ಬೆಂಗಳೂರು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಗ್ರಾಹಕರು ಎಚ್ಚರಿಕೆ ನೀಡಿದರು.

ಹೋರಾಟ ಸಮಿತಿ ಅಧ್ಯಕ್ಷ ಎಂ. ಗೋವಿಂದನ್ ನಾಯರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News