ಆರೋಪಿ ನ್ಯಾಯಾಲಯಕ್ಕೆ ಶರಣು
Update: 2016-03-24 18:35 GMT
ಮಂಜೇಶ್ವರ, ಮಾ.24: ವಿವಾಹಿತ ಮಹಿಳೆಯನ್ನು ವಸತಿಗೃಹಕ್ಕೆ ಕರೆದೊಯ್ದು ಮಾದಕ ತಂಪು ಪಾನೀಯ ಕುಡಿಸಿ ಆಕೆಯ ಫೋಟೊ ತೆಗೆದ ಪ್ರಕರಣದ ಆರೋಪಿ ಕಣ್ಣೂರು ವೈಲೋಟ್ ಚೆಟ್ಟಕ್ಕಾಡ್ ನಿವಾಸಿ, ಕಾಸರಗೋಡಿನ ಬಾಂಬ್ ಸ್ಕ್ವಾಡ್ ಎಎಸ್ಸೈ ಕೃಷ್ಣನ್ ಸಿ.(40) ಕಾಸರಗೋಡು ಅಡಿಶನಲ್ ಸೆಶನ್ಸ್ (ಪ್ರಥಮ) ನ್ಯಾಯಾಲಯದಲ್ಲಿ ಶರಣಾಗಿದ್ದಾನೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.