ಇಂದು ದಸಂಸದಿಂದ ಪ್ರತಿಭಟನೆ

Update: 2016-03-24 18:39 GMT

ಉಡುಪಿ, ಮಾ.24: ದ.ಕ. ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೆಸರು ಮುದ್ರಿಸಿರುವುದನ್ನು ವಿರೋಧಿಸುವ ಮೂಲಕ ಕೋಮುಪಿತೂರಿ ನಡೆಸು ತ್ತಿರುವ ಸಂಘಪರಿವಾರದ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಾ.25ರಂದು ಬೆಳಗ್ಗೆ 10:30ಕ್ಕೆ ಬಸ್ ನಿಲ್ದಾಣದ ಬಳಿ ಇರುವ ಗಡಿಯಾರ ಗೋಪುರದ ಬಳಿ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News