ಭಟ್ಕಳ : ಐ.ಎಫ್.ಎಸ್. ಅಧಿಕಾರಿ ದಾಮೋದರ ಎ.ಟಿ.ಗೆ ಸನ್ಮಾನ

Update: 2016-03-25 13:06 GMT

 ಭಟ್ಕಳ : ಭಟ್ಕಳದ ನ್ಯೂ ಇಂಗ್ಲೀಷ ಶಾಲೆಯಲ್ಲಿ ನಡೆದ ಭಟ್ಕಳ ತಾಲೂಕಾ ಆರ್ಯ ಈಡಿಗ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಐ.ಎಫ್.ಎಸ್. ಪರೀಕ್ಷೆ ತೇರ್ಗಡೆಯಾಗಿ ಗೋವಾ ರಾಜ್ಯದಲ್ಲಿ ಡಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಮಾಜದ ನಾಗವಳ್ಳಿ ನಿವಾಸಿ ದಾಮೋದರ್ ಎ.ಟಿ ಯನ್ನು ಸನ್ಮಾನಿಸಲಾಯಿತು. ನಾಮಧಾರಿ ಕ್ಷೇಮಾಭಿವೃದ್ದಿ ಭಟ್ಕಳ ತಾಲೂಕಾಧ್ಯಕ್ಷ ಶ್ರೀಧರ ನಾಯ್ಕ, ಕಾರ್ಯದರ್ಶಿ ಶಂಕರ ನಾಯ್ಕ, ಗೋಪಾಲ ನಾಯ್ಕ, ಸಮಾಜ ಅಧ್ಯಕ್ಷ ಡಿ. ಬಿ. ನಾಯ್ಕ, ಉತ್ತರ ಕನ್ನಡ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ನಾಗೇಶ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News