ವಿಟ್ಲ : ಉದಯಾಸ್ತಮಾನ ಉರೂಸ್ ಹಾಗೂ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ

Update: 2016-03-25 13:18 GMT

ವಿಟ್ಲ : ಕನ್ಯಾನ ರಹ್ಮಾನಿಯ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ಖ.ಸಿ.) ಅವರ ಹೆಸರಿನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉದಯಾಸ್ತಮಾನ ಉರೂಸ್ ಹಾಗೂ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಗುರುವಾರ ರಾತ್ರಿ ಆರಂಭಗೊಂಡಿದೆ. 
    ಸಯ್ಯಿದ್ ಹಬೀಬುಲ್ಲಾಹಿ ಅಲ್-ಹೈದ್ರೋಸಿ ತಂಙಳ್ ಅಲ್-ಬುಖಾರಿ ಪೆರುವಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ಖಾಝಿ ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೂರತ್ ಅಧ್ಯಕ್ಷತೆ ವಹಿಸಿದ್ದರು. 
    ರಫೀಕ್ ಸಅದಿ ದೇಲಂಪಾಡಿ ಮುಖ್ಯ ಭಾಷಣಗೈದರು. ಕನ್ಯಾನ ರಹ್ಮಾನಿಯ ಜುಮಾ ಮಸೀದಿಯ ಉಪಾಧ್ಯಕ್ಷ ಎಂ.ಕೆ ಮಹಮ್ಮದ್ ಕುಂಞ ಕನ್ಯಾನ, ಜೊತೆ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಕರೋಪಾಡಿ ಖತೀಬ್ ಹಕೀಂ ಮದನಿ, ಕಾಂತಡ್ಕ ಖಿಲ್‍ರಿಯಾ ಮಸೀದಿ ಖತೀಬ್ ಅಬ್ದುಲ್ಲಾ ಸಖಾಫಿ, ಇಬ್ರಾಹಿಂ ಮದನಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕನ್ಯಾನ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News