ಅಳಕೆಮಜಲು: ಇಂದು ಬುರ್ದಾ ಮಜ್ಲಿಸ್
Update: 2016-03-25 18:22 GMT
ವಿಟ್ಲ, ಮಾ.25: ಅಳಕೆಮಜಲು ಖ್ವಾಜಾ ಗರೀಬ್ ನವಾಝ್ ಮೀಲಾದ್ ಸಮಿತಿಯ ದಶಮಾನೋತ್ಸವದ ಪ್ರಯುಕ್ತ ಮತ ಪ್ರವಚನ ಹಾಗೂ ಬುರ್ದಾ ಮಜ್ಲಿಸ್ ಮಾ.26ರಂದು ಇಲ್ಲಿನ ಮಸೀದಿ ಬಳಿ ನಡೆಯಲಿದೆ. ಕಾರ್ಯಕ್ರಮವನ್ನು ಹಾಜಿ ಮುಹಮ್ಮದ್ ಮುಸ್ಲಿಯಾರ್ ಅಲ್ಖಾಸಿಮಿ ಅಳಕೆಮಜಲು ಉದ್ಘಾಟಿಸಲಿದ್ದು, ಸ್ಥಳೀಯ ಖತೀಬ್ ಎಸ್.ವೈ. ಮುಹಮ್ಮದ್ ಶರ್ೀ ಸಖಾಫಿ ಅಧ್ಯಕ್ಷತೆ ವಹಿಸುವರು. ಮಲಪ್ಪುರಂನ ಸೈಯದ್ ಮುಹ್ಸಿನ್ ಅಲವಿ ತಂಳ್ ದುಆಶೀರ್ವಚನಗೈಯಲಿದ್ದು, ಅಬ್ದುಲ್ ವಹಾಬ್ ನಈಮಿ ಕೊಲ್ಲಂ ಮುಖ್ಯ ಭಾಷಣಗೈಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.