ಕಾಸರಗೋಡು : ಸ್ನೇಹಿತರಿಬ್ಬರ ಆತ್ಮಹತ್ಯೆ - ಒಂದೇ ಕೋಣೆಯಲ್ಲಿ

Update: 2016-03-26 10:52 GMT

ಕಾಸರಗೋಡು : ಸ್ನೇಹಿತರಿಬ್ಬರು ಒಂದೇ ಕೋಣೆ ಯಲ್ಲಿ  ನೇಣುಬಿಗಿದು  ಆತ್ಮಹತ್ಯೆ ಗೈದ   ಘಟನೆ  ಕಣ್ಣೂರಿನಲ್ಲಿ  ನಡೆದಿದೆ.

ಆಲಕ್ಕೋಡು ಪೇಟೆಯ  ಪಿಕಪ್ ವ್ಯಾನ್ ಚಾಲಕ   ರಾಜು  ( 52) ಮತ್ತು ಸ್ನೇಹಿತ  ಲಾಟರಿ  ಮಾರಾಟಗಾರ  ಕಣ್ಣನ್ ( 32) ಮ್ರತಪಟ್ಟವರು.

ಇಬ್ಬರು ಬಾಡಿಗೆ ರೂಂ  ಪಡೆದಿದ್ದರು.  ಆತ್ಮಹತ್ಯೆ ಗೈಯ್ಯುವ ಮೊದಲು ರಾಜು ತನ್ನ ಮೊಬೈಲ್ ನಿಂದ ಇನ್ನೋರ್ವ ಸ್ನೇಹಿತ ಬಾಬು ರಾಜು ವಿನ ಮೊಬೈಲ್ ಗೆ  ಕರೆ  ಮಾಡಿ ಆರ್ಥಿಕ ನಷ್ಟ ಮತ್ತು  ಅನಾರೋಗ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆನ್ನಲಾಗಿದೆ .

ಕೂಡಲೇ ಬಾಬುರಾಜ್ ಮತ್ತು ಇತರ ಸ್ನೇಹಿತರು ಇಬ್ಬರ ಮನೆಗಳಿಗೆ ತಲುಪಿದ್ದು , ಇಬ್ಬರು ಅಲ್ಲಿರಲಿಲ್ಲ. ಇದರಿಂದ ಶೋಧ ನಡೆಸಿದಾಗ ಆಲಕ್ಕೋಡು  ಬಳಿ ಬಾಡಿಗೆ ರೂ೦  ಪಡಿರುವ ಬಗ್ಗೆ ಮಾಹಿತಿ ಲಭಿಸಿತ್ತು . ಇದರಂತೆ ತೆರಳಿದಾಗ   ಬಾಗಿಲು ಜಡಿದಿದ್ದು,   ಮೊಬೈಲ್ ಗೆ  ಕರೆ ಮಾಡಿದರೂ , ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ . ಕೊನೆಗೆ ಪೊಲೀಸರಿಗೆ  ಮಾಹಿತಿ ನೀಡಲಾಯಿತು . ಸ್ಥಳಕ್ಕಾಗಮಿಸಿದ  ಆಲಕ್ಕೋಡು  ಪೊಲೀಸರು  ಬಾಗಿಲು ಮುರಿದು ಒಳನುಗ್ಗಿದಾಗ ಇಬ್ಬರ ಮ್ರತದೇಹ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ .

ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News