ಕಾಸರಗೋಡು : ಸ್ನೇಹಿತರಿಬ್ಬರ ಆತ್ಮಹತ್ಯೆ - ಒಂದೇ ಕೋಣೆಯಲ್ಲಿ
ಕಾಸರಗೋಡು : ಸ್ನೇಹಿತರಿಬ್ಬರು ಒಂದೇ ಕೋಣೆ ಯಲ್ಲಿ ನೇಣುಬಿಗಿದು ಆತ್ಮಹತ್ಯೆ ಗೈದ ಘಟನೆ ಕಣ್ಣೂರಿನಲ್ಲಿ ನಡೆದಿದೆ.
ಆಲಕ್ಕೋಡು ಪೇಟೆಯ ಪಿಕಪ್ ವ್ಯಾನ್ ಚಾಲಕ ರಾಜು ( 52) ಮತ್ತು ಸ್ನೇಹಿತ ಲಾಟರಿ ಮಾರಾಟಗಾರ ಕಣ್ಣನ್ ( 32) ಮ್ರತಪಟ್ಟವರು.
ಇಬ್ಬರು ಬಾಡಿಗೆ ರೂಂ ಪಡೆದಿದ್ದರು. ಆತ್ಮಹತ್ಯೆ ಗೈಯ್ಯುವ ಮೊದಲು ರಾಜು ತನ್ನ ಮೊಬೈಲ್ ನಿಂದ ಇನ್ನೋರ್ವ ಸ್ನೇಹಿತ ಬಾಬು ರಾಜು ವಿನ ಮೊಬೈಲ್ ಗೆ ಕರೆ ಮಾಡಿ ಆರ್ಥಿಕ ನಷ್ಟ ಮತ್ತು ಅನಾರೋಗ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆನ್ನಲಾಗಿದೆ .
ಕೂಡಲೇ ಬಾಬುರಾಜ್ ಮತ್ತು ಇತರ ಸ್ನೇಹಿತರು ಇಬ್ಬರ ಮನೆಗಳಿಗೆ ತಲುಪಿದ್ದು , ಇಬ್ಬರು ಅಲ್ಲಿರಲಿಲ್ಲ. ಇದರಿಂದ ಶೋಧ ನಡೆಸಿದಾಗ ಆಲಕ್ಕೋಡು ಬಳಿ ಬಾಡಿಗೆ ರೂ೦ ಪಡಿರುವ ಬಗ್ಗೆ ಮಾಹಿತಿ ಲಭಿಸಿತ್ತು . ಇದರಂತೆ ತೆರಳಿದಾಗ ಬಾಗಿಲು ಜಡಿದಿದ್ದು, ಮೊಬೈಲ್ ಗೆ ಕರೆ ಮಾಡಿದರೂ , ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ . ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು . ಸ್ಥಳಕ್ಕಾಗಮಿಸಿದ ಆಲಕ್ಕೋಡು ಪೊಲೀಸರು ಬಾಗಿಲು ಮುರಿದು ಒಳನುಗ್ಗಿದಾಗ ಇಬ್ಬರ ಮ್ರತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ .
ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ