ಮಂಗಳೂರು : ನೂತನ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎವಿನ್ಸ್’ ಉದ್ಘಾಟನೆ

Update: 2016-03-26 12:59 GMT

ಮಂಗಳೂರು, ಮಾ.26: ಕಟ್ಟಡ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ನಗರದ ಇನ್‌ಲ್ಯಾಂಡ್ ಬಿಲ್ಡರ್ಸ್‌ ಸಂಸ್ಥೆಯಿಂದ ಕದ್ರಿಯಲ್ಲಿ ನೂತನವಾಗಿ ನಿರ್ಮಿಸಿರುವ ‘ಇನ್‌ಲ್ಯಾಂಡ್ ಎವಿನ್ಸ್’ ವಸತಿ ಸಮುಚ್ಚಯ ಇಂದು ಉದ್ಘಾಟನೆಗೊಂಡಿತು.

ಸ್ಥಳೀಯ ಕಾರ್ಪೊರೇಟರ್ ಅಶೋಕ್ ಡಿ.ಕೆ. ಅವರು ನೂತನ ಸಮುಚ್ಚಯದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್, ಅವರ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ಮೆರಾಜ್ ಯೂಸುಫ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಮಹಾಬಲೇಶ್ವರ ಬಿಲ್ಡರ್ಸ್‌ನ ಅಧ್ಯಕ್ಷ ಕೆ.ಸಿ.ನಾಯಕ್, ಪ್ಲಾಮಾ ಬಿಲ್ಡರ್ಸ್‌ನ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.

ಅಶೋಕ್ ಡಿ.ಕೆ.ಮಾತನಾಡಿ, ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಸಿರಾಜ್ ಅಹ್ಮದ್ ಅವರ ಕೊಡುಗೆ ಅಪಾರವಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಅವರ ಯಾವುದೇ ಯೋಜನೆಯಲ್ಲೂ ಪ್ರಥಮ ಹಂತದಲ್ಲೇ ಫ್ಲಾಟ್‌ಗಳು ವಿಕ್ರಯವಾಗುವುದು ಅವರ ಪ್ರಾಮಾಣಿಕತೆ, ಶ್ರದ್ಧೆ, ಕಟ್ಟಡ ನಿರ್ಮಾಣದಲ್ಲಿ ಬಳಸಿದ ಉತ್ಕೃಷ್ಟ ಗುಣಮಟ್ಟವೇ ಸಾಕ್ಷಿಯಾಗಿದೆ ಎಂದರು.

ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಗಿರಿಧರ ಭಟ್, ಬೆಂದೂರ್ ಚರ್ಚ್‌ನ ಧರ್ಮಗುರು ಫಾ.ಆ್ಯಂಟನಿ ಸೆರಾವೊ ಮತ್ತು ಅಲ್ ಅಝ್ಹರಿಯ ಮದ್ರಸದ ಯಹ್ಯಾ ಮದನಿ ಧಾರ್ಮಿಕ ವಿಧಿಯನ್ನು ನೆರವೇರಿಸಿದರು.

ಆಕರ್ಷಕ ಮತ್ತು ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವ 4 ಮಹಡಿಗಳ ‘ಇನ್‌ಲ್ಯಾಂಡ್ ಎವಿನ್ಸ್’ನಲ್ಲಿ 3 ಬಿಎಚ್‌ಕೆ, 2 ಬಿಎಚ್‌ಕೆ ಮತ್ತು 1 ಬಿಎಚ್‌ಕೆ ಬೆಡ್‌ರೂಂಗಳ 28 ವಿಶಾಲವಾದ ಫ್ಲಾಟ್‌ಗಳನ್ನು ಹೊಂದಿವೆ. ಜಿಮ್ನೇಶಿಯಂ, ಇಂಟರ್‌ಕಾಂ ಸೌಲಭ್ಯ, ಅಗ್ನಿನಿರೋಧಕ ವ್ಯವಸ್ಥೆ, ರೆಟಿಕ್ಯುಲೇಟೆಡ್ ಗ್ಯಾಸ್ ಸೌಕರ್ಯಗಳು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News