ಮಂಗಳೂರು : ಮೃತ ಮಹಿಳೆಯ ವಾರಿಸುದಾರರ ಪತ್ತೆಗೆ ಮನವಿ

Update: 2016-03-26 14:51 GMT

ಮಂಗಳೂರು, ಮಾ.26: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಎಂಬಲ್ಲಿ ವಾಹನ ಅಪಘಾತದಿಂದ ಅಪರಿಚಿತ ಮಹಿಳೆಯೋರ್ವರು ಮೃತಪಟ್ಟಿದ್ದು, ವಾರೀಸುದಾರರ ಪತ್ತೆಗೆ ಮನವಿ ಮಾಡಲಾಗಿದೆ.

ಮಾ. 14ರಂದು ಸಂಜೆ 7 ಗಂಟೆಗೆ ಅಪರಿಚಿತ ವೃದ್ಧ ಮಹಿಳೆಯೋರ್ವರಿಗೆ ವಾಹನವೊಂದು ಢಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡಿದ್ದ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಾ. 18ರಂದು ಮೃತಪಟ್ಟಿದ್ದರು. ಅಪರಿಚಿತ ಮಹಿಳೆಯ ವಾರೀಸುದಾರರು ಪತ್ತೆಯಾದಲ್ಲಿ ಪಿಎಸ್‌ಐ ಬಂಟ್ವಾಳ ಸಂಚಾರ ಠಾಣೆ ದೂ.ಸಂಖ್ಯೆ: 9448164585 ಪೊಲೀಸ್ ವೃತ್ತ ನಿರೀಕ್ಷಕರು: 9480805335 ಸಂಪರ್ಕಿಸಲು ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News