ಉಪ್ಪಿನಂಗಡಿ: ಚೆನ್ನೈಯಿಂದ ಮಂಗಳೂರಿಗೆ ರಾಸಾಯನಿಕವನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿ

Update: 2016-03-27 13:12 GMT

ಉಪ್ಪಿನಂಗಡಿ : ಚೆನ್ನೈಯಿಂದ ಮಂಗಳೂರಿಗೆ ರಾಸಾಯನಿಕವನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರೊಂದು ಚಾಲಕನ ನಿಯಂತ್ರಣಕ್ಕೆ ಸಿಗದೇ ಅಪಘಾತಕ್ಕೀಡಾದ ಘಟನೆ ನೆಲ್ಯಾಡಿ ಸಮೀಪದ ಕೋಲ್ಪೆ ಎಂಬಲ್ಲಿ ಆದಿತ್ಯವಾರ ಮಧ್ಯಾಹ್ನ ಸಂಭವಿಸಿದೆ.

    ವೇಗವಾಗಿ ಬಂದ ಟ್ಯಾಂಕರ್ ಕೋಲ್ಪೆಯ ತಿರುವಿನಲ್ಲಿ ನೇರವಾಗಿ ಚಲಿಸಿ ಹೆದ್ದಾರಿ ಬದಿಯ ನಾಲ್ಕಡಿ ಎತ್ತರದ ದಿನ್ನೆಯನ್ನೇರಿ ಅಲ್ಲಿ ಮಗುಚಿ ಬಿತ್ತು. ಘಟನೆಯಿಂದ ಟ್ಯಾಂಕರ್ ಚಾಲಕ ಯಾವುದೇ ಅಪಾಯಗಳಿಲ್ಲದೆ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದು, ಟ್ಯಾಂಕರ್‌ನಲ್ಲಿದ್ದ ರಾಸಾಯನಿಕ ಕೂಡಾ ಸೋರಿಕೆಗೆ ತುತ್ತಾಗದೇ ಯಾವುದೇ ಅಪಾಯ ಸಂಭವಿಸಲಿಲ್ಲ. ಅಪಘಾತಕ್ಕೀಡಾದ ಟ್ಯಾಂಕರ್ ಹೆದ್ದಾರಿಯಂಚಿನಿಂದ ಹೊರಗೆ ಎಸೆಯಲ್ಪಟ್ಟ ರೀತಿಯಲ್ಲಿ ಮಗುಚಿ ಬಿದ್ದ ಕಾರಣ ವಾಹನ ಸಂಚಾರಕ್ಕೂ ಯಾವುದೇ ತಡೆಯುಂಟಾಗಲಿಲ್ಲ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News