ಮಂಗಳೂರು: ಈಸ್ಟರ್ ಹಬ್ಬ ಆಚರಣೆ

Update: 2016-03-27 16:29 GMT

ಮಂಗಳೂರು,ಮಾ.27: ಏಸುಕ್ರಿಸ್ತ ಪುನರುತ್ಥಾನದ ದಿನವೆಂದು ಪೂಜಿಸಲ್ಪಡುವ ಈಸ್ಟರ್ ಹಬ್ಬವನ್ನು ಇಂದು ಜಿಲ್ಲೆಯಲ್ಲಿ ಕ್ರೈಸ್ತ ಭಾಂಧವರು ಸಂಭ್ರಮದಿಂದ ಆಚರಿಸಿದರು.

ಶನಿವಾರ ರಾತ್ರಿ ಎಲ್ಲಾ ಚರ್ಚ್‌ಗಳಲ್ಲಿ ಕ್ರೈಸ್ತ ಭಾಂಧವರು ವಿಶೇಷ ಪೂಜೆಯನ್ನು ನಡೆಸಿ ಈಸ್ಟರ್ ಹಬ್ಬದ ಪ್ರಾರ್ಥನೆಯನ್ನು ಮಾಡಿದರು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಗುರು ಅ.ವಂ.ಅಲೋಶಿಯಸ್ ಪಾವ್ಲ್ ಡಿಸೋಜ ನಗರದ ರೊಸರಿಯೋ ಚರ್ಚ್‌ನಲ್ಲಿ ವಿಶೇಷ ಪೂಜೆ ನಡೆಸಿದರು. ಅಗ್ನಿ ಆಶಿರ್ವಚನ ನಡೆಸಿದ ನಂತರ ಅಗ್ನಿಯ ಮೂಲಕ ದೊಡ್ಡ ಕ್ಯಾಂಡಲ್ ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂಧರ್ಭದಲ್ಲಿ ಭಕ್ತರ ಸಾಮೂಹಿಕ ಪ್ರಾರ್ಥನೆ ನೆರವೇರಿತು.
ರವಿವಾರದಂದು ಚರ್ಚ್‌ಗಳಲ್ಲಿ ಪೂಜೆ ಸಲ್ಲಿಸಿದ ಕ್ರೈಸ್ತ ಭಾಂಧವರು ಈಸ್ಟರ್ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಹಬ್ಬದಡುಗೆ ಮಾಡಿ ಸಂಭ್ರಮಿಸಿದರು.
ಈಸ್ಟರ್ ಹಬ್ಬಕ್ಕೆ ಮುಂಚಿನ 40 ದಿನಗಳ ಕಾಲ ಸಸ್ಯಹಾರ ಸೇವಿಸುತ್ತಿದ್ದ ಕ್ರೈಸ್ತ ಭಾಂಧವರು ಇಂದು ಮಾಂಸಾಹಾರ ಸೇವನೆ ಮಾಡಿ ಹಬ್ಬದಡುಗೆ ಮಾಡಿ ಈಸ್ಟರ್ ಹಬ್ಬ ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News