ನಾಡಿನೆಲ್ಲೆಡೆ ಸಂಭ್ರಮದ ಈಸ್ಟರ್ ಆಚರಣೆ

Update: 2016-03-27 18:58 GMT

ಮಂಗಳೂರು/ಕಾಸರಗೋಡು, ಮಾ.27: ನಾಡಿನೆ ಲ್ಲೆಡೆ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ನ್ನು ಎಲ್ಲ ಚರ್ಚ್ಗಳಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿದರು. ಚರ್ಚ್ಗಳಲ್ಲಿ ಶನಿವಾರ ರಾತ್ರಿ ಮತ್ತು ರವಿವಾರ ಬೆಳಗ್ಗೆ ಹಬ್ಬದ ವಿಶೇಷ ಬಲಿಪೂಜೆ ನೆರವೇರಿದವು.
ಶನಿವಾರ ರಾತ್ರಿ ಹೊಸ ಅಗ್ನಿಯ ಆಶೀರ್ವಚನ ದೊಂದಿಗೆ ಹಬ್ಬ ಆಚರಣೆ ಆರಂಭಗೊಂಡವು. ಹೊಸ ಅಗ್ನಿಯಿಂದ ಈಸ್ಟರ್ ಮೊಂಬತ್ತಿಯನ್ನು ಚರ್ಚ್‌ಗಳ ಧರ್ಮಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಕ್ರೈಸ್ತರು ಆ ಅಗ್ನಿಯ ಮೂಲಕ ಮೇಣದ ಬತ್ತಿ ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಬೈಬಲ್‌ನ ಹಳೆಯ ಮತ್ತು ಹೊಸ ಒಡಂ ಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಬಿಷಪರು/ಧರ್ಮಗುರುಗಳು ಪ್ರವಚನ ಮತ್ತು ಹಬ್ಬದ ಸಂದೇಶ ನೀಡಿದರು. ಪವಿತ್ರ ಜಲದ ಆಶೀರ್ವ ಚನ ಹಾಗೂ ಕ್ರೈಸ್ತ ವಿಶ್ವಾಸ, ಸತ್ಯದ ಮರು ದೃಢೀಕರಣ ಈ ಸಂದರ್ಭ ನೆರವೇರಿತು.
ರವಿವಾರದಂದು ಚರ್ಚ್‌ಗಳಲ್ಲಿ ಪೂಜೆ ಸಲ್ಲಿಸಿದ ಕ್ರೈಸ್ತರು ಈಸ್ಟರ್ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಹಬ್ಬದ ಡುಗೆ ಮಾಡಿ ಸಂಭ್ರಮಿಸಿದರು.
ಈಸ್ಟರ್ ಹಬ್ಬಕ್ಕೆ ಮುಂಚಿನ 40 ದಿನಗಳ ಕಾಲ ಸಸ್ಯಾಹಾರ ಸೇವಿಸುತ್ತಿದ್ದ ಕ್ರೈಸ್ತರು ಇಂದು ಮಾಂಸಾ ಹಾರ ಸೇವನೆ ಮಾಡಿ ಹಬ್ಬದಡುಗೆ ಮಾಡಿ ಈಸ್ಟರ್ ಹಬ್ಬ ಆಚರಿಸಿದರು.
ಮಂಗಳೂರು ಬಿಷಪ್ ಅ.ವಂ.ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ಮಂಗಳೂರಿನ ರೊಝಾರಿಯೊ ಚರ್ಚ್‌ನಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಪುತ್ತೂರಿನ ಮಾಯ್ದೆ ದೇವುಸ್ ಚರ್ಚ್ ನಲ್ಲಿ ಪ್ರಧಾನ ದಿವ್ಯ ಬಲಿಪೂಜೆಯನ್ನು ಪ್ರಧಾನ ಧರ್ಮಗುರು ವಂ.ಆಲ್ಫ್ರೆಡ್ ಜೆ. ಪಿಂಟೊ ನೆರವೇರಿಸಿದರು. ಸಹಾ ಯಕ ಧರ್ಮಗುರು ವಂ.ಸಂತೋಷ್ ಡಿಸೋಜ ನೇತೃತ್ವ ದಲ್ಲಿ ಬಲಿಪೂಜೆ ನೆರವೇರಿತು.
ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಧರ್ಮಗುರು ವಂ.ಫ್ರಾನ್ಸಿಸ್ ಆಸ್ಸಿಸಿ ಡಿ ಆಲ್ಮೇಡ, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಧರ್ಮ ಗುರು ವಂ.ನಿಕೋಲಸ್ ಡಿಸೋಜ, ಮನೆಲ ಕ್ರಿಸ್ತರಾಯ ಚರ್ಚ್‌ನಲ್ಲಿ ಧರ್ಮಗುರು ವಂ.ಸ್ಟೀವನ್ ಡಿಸೋಜ ದಿವ್ಯ ಬಲಿಪೂಜೆ ನೆರವೇರಿಸಿದರು.
ಕಾಸರಗೋಡು-ಕಯ್ಯರು ಕ್ರಿಸ್ತ ರಾಜ ದೇವಾಲಯ ದಲ್ಲಿ ಧಾರ್ಮಿಕ ವಿಧಿ ವಿಧಾನವನ್ನು ಧರ್ಮಗುರು ವಂ.ವಿಕ್ಟರ್ ಡಿಸೋಜ ನೆರವೇರಿಸಿದರು. ವಂ.ಫಾ. ಪ್ಯಾಟ್ರಿಕ್ ಪ್ರವಚನ ನೀಡಿದರು. ಕಾಸರಗೋಡು, ಬೇಳ, ಕುಂಬಳೆ, ಮಂಜೇಶ್ವರ, ತಲಪಾಡಿ, ಮೀಯಪದವು, ನಾರಂಪಾಡಿ, ಉಕ್ಕಿನಡ್ಕ, ಮಣಿಯಂಪಾರೆ, ನಾರಾಂಪಾಡಿ, ವರ್ಕಾಡಿ, ಪಾವೂರು ಚರ್ಚ್
ಗಳಲ್ಲಿ ಆಯಾ ಧರ್ಮಗುರು ಮುಖಂಡತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಕ್ರೈಸ್ತ ಸಂತರನ್ನು ಸ್ಮರಿಸಿ ಅವರ ಶುಭಾಶೀರ್ವಾದ ಕೋರಲಾಯಿತು. ಸಂಭ್ರಮದ ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೈಸ್ತ ಬಾಂಧವರು ಈಸ್ಟರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News