ಬೆಳ್ತಂಗಡಿ: ಅಪಘಾತರಹಿತವಾಗಿ 15 ವರ್ಷ ವಾಹನ ಚಲಾವಣೆ ಮಾಡಿದ - ಸದಾನಂದ ಪೂಜಾರಿ

Update: 2016-03-28 12:10 GMT

ಬೆಳ್ತಂಗಡಿ: ಅಪಘಾತರಹಿತವಾಗಿ 15 ವರ್ಷ ವಾಹನ ಚಲಾವಣೆ ಮಾಡಿದ ರಾಜ್ಯ ಸಾರಿಗೆ ಸಂಸ್ಥೆಯ ಧರ್ಮಸ್ಥಳ ಡಿಪ್ಪೋದ ಚಾಲಕ ಧರ್ಮಸ್ಥಳ ನಿವಾಸಿ ಸದಾನಂದ ಪೂಜಾರಿ ಅವರು ಮುಖ್ಯಮಂತ್ರಿಯವರ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. 1992 ರಲ್ಲಿ ಧರ್ಮಸ್ಥಳ ಡಿಪ್ಪೋದಲ್ಲಿ ಚಾಲಕರಾಗಿ ಕರ್ತವ್ಯಕ್ಕೆ ಸೇರಿದ ಸದಾನಂದ ಅವರು 2002 ರಲ್ಲಿ ಸುರಕ್ಷಿತ ಚಾಲನೆಗಾಗಿ ಬೆಳ್ಳಿಪದಕವನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News