ಮೂಡುಬಿದಿರೆ : ಜೀಪು ಪಲ್ಟಿ, ಪ್ರಯಾಣಿಕ ಸಾವು

Update: 2016-03-28 15:29 GMT

 ಮೂಡುಬಿದಿರೆ: ಪಡುಕೊಣಾಜೆ ಗ್ರಾಮದ ಹೌದಾಲು ಎಂಬಲ್ಲಿ ಸೋಮವಾರ ಮಧ್ಯಾಹ್ನ ಜೀಪು ಪಲ್ಟಿ ಹೊಡೆದು ಓರ್ವ ಪ್ರ0ಾಣಿಕ ಸಾವನಪ್ಪಿದರೆ, ಇಬ್ಬರು ವ್ಯಕ್ತಿಗಳು ಗಾ0ುಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  ಮೃತ ವ್ಯಕ್ತಿ0ುನ್ನು ಬೆಳ್ತಂಗಡಿ ತಾಲ್ಲೂಕಿನ ಸುಲ್ಕೇರಿ ಜ0ುಪ್ರಕಾಶ್(45)ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಜೀಪು ಚಾಲಕ ಸಂದೀಪ್ ಇನ್ನೋರ್ವ ಪ್ರ0ಾಣಿಕ ತಿಮ್ಮ0್ಯು ಗಾ0ುಗೊಂಡಿದ್ದಾರೆ. ಜೀಪಿನಲ್ಲಿ ಒಟ್ಟು 7 ಪ್ರ0ಾಣಿಕರಿದ್ದರು. ಸುಲ್ಕೇರಿ0ುಲ್ಲಿ ಮಂಗಳವಾರದಂದು ಎಲ್ಲಾ ಧರ್ಮದವರು ಸೇರಿಕೊಂಡು "ಪುರುಷ ಹಬ್ಬ" ನಡೆ0ುಲಿದ್ದು ಹಬ್ಬಕ್ಕೆ ಮೊದಲು ಕದ್ರಿ ದೇವಸ್ಥಾನದಿಂದ ಪ್ರಸಾದವನ್ನು ತರುವ ಕ್ರಮ ಇದೆ. ಸೋಮವಾರ ಊರಿನ ಏಳು ಮಂದಿ ಜೀಪಿನಲ್ಲಿ ಕದ್ರಿ ದೇವಸ್ಥಾನಕ್ಕೆ ತೆರಳಿ ಪ್ರಸಾದ ಹಿಡಿದುಕೊಂಡು ವಾಪಾಸು ಸುಲ್ಕೇರಿಗೆ ಹೋಗುತ್ತಿರುವಾಗ ಹೌದಾಲು ಎಂಬಲ್ಲಿ ಜೀಪಿನ ಎದುರಿನ ಚಕ್ರ ಸ್ಫೋಟಗೊಂಡು ಸ್ವಲ್ಪ ದೂರ ಹೋದಾಗ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News