4 ಲಕ್ಷ ರೂ. ವೌಲ್ಯದ 146.050 ಗ್ರಾಂ ಚಿನ್ನ ವಶ

Update: 2016-03-28 18:19 GMT

ಕಾರ್ಕಳ, ಮಾ.28: ಹಳೆಯ ಐದು ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ವೌಲ್ಯದ 146.050 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಪ್ರಸ್ತುತ ಜೋಡುರಸ್ತೆ ಹಿಮ್ಮಂಜೆ ಬಳಿ ವಾಸವಾಗಿರುವ ಮೂಡಿಗೆರೆ ಮತ್ತು ಚಿಕ್ಕಮಗಳೂರು ಮೂಲದ ಆನಂದ (34), ರತ್ನಾ (38) ಮತ್ತು ಮಧುರಾ (30) ಬಂಧಿತ ಆರೋಪಿಗಳು. ರೋಪಿ ಆನಂದ ಗುಜರಿ ಹೆಕ್ಕುವ ಕೆಲಸದಲ್ಲಿ ನಿರತನಾಗಿದ್ದು, ಮನೆಮನೆಗೆ ಗುಜರಿ ಸಂಗ್ರಹಿಸುತ್ತಿದ್ದಾನೆ. ಅದೇ ವೇಳೆ ಮನೆಯ ವಾತಾವರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕನ್ನ ಹಾಕುತ್ತಿದ್ದ.ಅಲ್ಲಿದ್ದ ಚಿನ್ನಾಭರಣಗಳನ್ನು ಎಗರಿಸಿದ್ದ. ಅಲ್ಲದೆ ಇಬ್ಬರು ಮಹಿಳೆಯರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿಯಿಟ್ಟು ಹಣ ಪಡೆದುಕೊಂಡಿದ್ದ. ್ರಕರಣಗಳು : 2012ರಲ್ಲಿ ಕುಕ್ಕುಂದೂರು ಗ್ರಾಮದ ರಾಮ ಆಚಾರ್ಯ, 2014ರಲ್ಲಿ ಮುಂಡ್ಕೂರು ಗ್ರಾಮದ ಶೃತಿ ಶೆಟ್ಟಿಗಾರ್, ನಿಟ್ಟೆ ಗ್ರಾಮದ ಸುಮಾ ಮಧು ಸೂದನ್, 2015ರಲ್ಲಿ ಮುಡಾರು ಗ್ರಾಮದ ಬಜಗೋಳಿ ಗುರ್ಗಾಲ್‌ಗುಡ್ಡೆ ರಮೇಶ್ ಮತ್ತು ನಿಟ್ಟೆ ಗ್ರಾಮದ ಶ್ರೀರಾಮನಗರದ ಸೀತಾರಾಮ ಶೆಟ್ಟಿಯ ಮನೆಗೆ ಕನ್ನ ಹಾಕಲಾಗಿತ್ತು.ಾರ್ಕಳ ಎಎಸ್ಪಿ ಡಾ.ಸುಮನಾ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕ ಟಿ.ಆರ್.ಜೈಶಂಕರ್, ಎಎಸ್ಸೈ ರೊಸಾರಿಯೊ ಡಿಸೋಜ, ಸುರೇಶ್, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ರವಿಚಂದ್ರ, ರಾಘವೇಂದ್ರ, ಶಿವಾನಂದ, ರಾಜ್ ಕುಮಾರ್, ದಯಾನಂದ ಪ್ರಭು, ಪ್ರವೀಣ್ ಮತ್ತು ಚಾಲಕ ರಾಘವೇಂದ್ರ, ನವೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಲ್ಲಾ ಎಸ್ಪಿಶ್ಲಾಘನೆ: ಸಿ ರಿಪೋರ್ಟ್ ಹಾಕಲಾದ ಹಳೆಯ ಪ್ರಕರಣವನ್ನು ಭೇದಿಸಿದ ಎಎಸ್ಪಿ ನೇತೃತ್ವದ ತಂಡವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಶ್ಲಾಘಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ತಂಡಕ್ಕೆ 10 ಸಾವಿರ ರೂ. ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ ಕಾನೂನು ಬಾಹಿರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ 15 ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸಿ ಚುನಾವಣಾ ಸಂದರ್ಭ ನಡೆಸುವ ಕಾರ್ಯಾಚರಣೆಯಂತೆ ಇದೀಗ ನಡೆಸಲಾಗುತ್ತಿದೆ. ದೇವಳಗಳ ಕಳವು ಪ್ರಕರಣಗಳು ಕಾರ್ಕಳದಲ್ಲಿ ಹೆಚ್ಚಿದ್ದು, ಈ ಬಗ್ಗೆಯೂ ಇಲಾಖೆ ನಿಗಾವಹಿಸಿದೆ. ಶಿರ್ಲಾಲು ಬಸದಿ ಕಳವು ಬಗ್ಗೆ ಕೆಲವೊಂದು ಮಾಹಿತಿಗಳು ಲಭಿಸಿದ್ದು, ಕೂಡಲೇ ಆ ಪ್ರಕರಣವನ್ನು ಬೇಧಿಸುವುದಾಗಿ ಎಸ್ಪಿಭರವಸೆ ನೀಡಿದರು.

ಬೆಳ್ಮಣ್ಣುವಿನಲ್ಲಿರುವ ಪಬ್ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಅದರ ಪರವಾನಿಗೆಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಬಂಡೀಮಠ ಬಸ್ ನಿಲ್ದಾಣದ ಬಳಕೆಯ ಬಗ್ಗೆ ಆರ್‌ಟಿಒ ಜತೆ ಸಭೆ ನಡೆಸಿ ತಪ್ಪಿತಸ್ಥ ಬಸ್ ಚಾಲಕ-ಮಾಲಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News