ರೈಲು ಢಿಕ್ಕಿ: ವೃದ್ಧ ಸಾವು
Update: 2016-03-28 18:54 GMT
ಉಳ್ಳಾಲ, ಮಾ.28: ರೈಲು ಹಳಿ ದಾಟುತ್ತಿದ್ದ ವೃದ್ಧರೊಬ್ಬರು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ರೈಲ್ವೆ ನಿಲ್ದಾಣ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ. ಉಳ್ಳಾಲ ಉಳಿಯ ನಿವಾಸಿ ವಿಠಲ (62) ಸಾವನ್ನಪ್ಪಿದವರು. ಬೆಳಗ್ಗೆ ಮನೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ, ರೈಲು ಹಳಿ ದಾಟುವ ಸಂದಭರ್ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.