ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಜಾತ್ರಾ ಮಹೋತ್ಸವ
ಕಿನ್ನಿಗೋಳಿ, ಮಾ.29: ದೈವ ದೇವರ ಮೇಲೆ ಭಕ್ತಿ ಇರುವಲ್ಲಿ ಶಕ್ತಿ ಇರುತ್ತದೆ. ಶ್ರದ್ಧಾಪೂರ್ಣ ಭಕ್ತಿಯಿಂದ ದೇವರ ಸಂಪೂರ್ಣ ಅನುಗ್ರಹ ಲಭಿಸುವದು ಎಂದು ಕಾರ್ನಾಡು ಹರಿಹರ ಕ್ಷೇತ್ರದಆಡಳಿತ ಮುಕ್ತೇಸರ ಅರವಿಂದ ಪೂಂಜ ಹೇಳಿದರು.
ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ದಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭ ದೈವಸ್ಥಾನದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮದ ಕುಮಾರಿ ದಿವ್ಯ, ದೇವಿ ಪ್ರಸಾದ್ ಕುಂದರ್, ಕುಮಾರಿ ಸ್ವಾತಿ ಇವರಿಗೆ ವಿದ್ಯಾರ್ಥಿ ವೇತನ, ನಾಗಪ್ಪ ಮುಖಾರಿ ಅತ್ತೂರು ಪುನೂಡಿ, ಲಲಿತಾ ಮೂಲ್ಯ ಕಾಪಿಕಾಡ್, ರಮೇಶ್ ದೇವಾಡಿಗ ಸಾನದ ಮನೆ ಕಿಲೆಂಜೂರು ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಧನ ನೀಡಲಾಯಿತು.
ಪಂಜ ವಾಸುದೇವ ಭಟ್ ಆಶೀರ್ವಾಚನ ಗೈದರು. ಪಸನ್ನ ಎಲ್.ಶೆಟ್ಟಿ ಅತ್ತೂರಗುತ್ತು ಪ್ರಸಾವನೆಗೈದರು. ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಸಂಚಾಲಕಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಮುಲ್ಕಿ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಗಣೇಶ್ ಶೆಟ್ಟಿ ಐಕಳ, ವಿಶ್ವನಾಥ ಶೆಟ್ಟಿ ಐಕಳ, ಗೋವಿಂದ ಶೆಟ್ಟಿ ಅತ್ತೂರು ಗುತ್ತು, ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು, ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ, ಶ್ರೀ ಅಖಿಲಾಂಡೇಶ್ವರೀ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಲೀಲಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.