ಬಾಳಿಗಾ ಹತ್ಯೆಯಲ್ಲಿ ಯುವ ಬ್ರಿಗೇಡ್ ಪಾತ್ರ?
Update: 2016-03-29 18:31 GMT
ಮಂಗಳೂರು, ಮಾ. 29: ಆರ್ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆಯ ಹಿಂದೆ ಯುವ ಬ್ರಿಗೇಡ್ ಸಂಘಟನೆಯ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ.
ಯುವ ಬ್ರಿಗೇಡ್ನ ಕನ್ವೀನರ್ ನರೇಶ್ ಶೆಣೈ ಅವರನ್ನು ವಿಚಾರಣೆಗಾಗಿ ಕರೆತರಲು ಸೋಮವಾರ ರಾತ್ರಿ ಬಂದರು ಪೊಲೀಸರು ಅವರ ಕಾರ್ಸ್ಟ್ರೀಟ್ನ ನಿವಾಸಕ್ಕೆ ತೆರಳಿದ್ದು, ಆದರೆ, ಅವರು ಆ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಾಳಿಗಾ ಅವರನ್ನು ಮಾರ್ಚ್ 21ರಂದು ಬೆಳಗ್ಗೆ ಸುಮಾರು 5:30ರ ಹೊತ್ತಿಗೆ ಕೊಡಿಯಾಲ್ಬೈಲ್ನ ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ್ದರು. ಈ ಸಂಬಂಧ ಪೊಲೀಸರು ವಿನಿತ್ ಪೂಜಾರಿ ಮತ್ತು ನಿಶಿತ್ ದೇವಾಡಿಗ ಎಂಬಿಬ್ಬರನ್ನು ಬಂಧಿಸಿದ್ದು, ಇದೀಗ ಅವರನ್ನು ಬರ್ಕೆ ಠಾಣಾ ಪೊಲೀಸರಿಗೆ ಒಪ್ಪಿಸಲಾಗಿದೆ.