ಇಂದು ಆಕಾಶವಾಣಿಯಲ್ಲಿ ಮುಂಡ್ಕೂರು ಗ್ರಾಮನುಡಿ ಚಿತ್ರ
Update: 2016-03-29 18:46 GMT
ಉಡುಪಿ, ಮಾ.29: ಮಂಗಳೂರು ಆಕಾಶವಾಣಿ ಕೇಂದ್ರ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ಬಿತ್ತರಿಸುವ ಮಾರ್ಚ್ ತಿಂಗಳ ಬಾನುಲಿ ಗ್ರಾಮಾಯಣದ 4ನೆ ಸಂಚಿಕೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ವಾಸ್ತವ್ಯದ ವಿಶೇಷ ನುಡಿಚಿತ್ರವನ್ನು ಮಾ.30ರಂದು ಬೆಳಗ್ಗೆ 8:50ಕ್ಕೆ ಪ್ರಸಾರ ಮಾಡಲಿದೆ.
ಮುಂಡ್ಕೂರಿನ ಪುರಾಣ ಪ್ರಸಿದ್ಧ ದೇಗುಲಗಳು, ಇತಿಹಾಸದ ಮಹತ್ವ, ಅಭಿವೃದ್ಧಿಯ ಕುರಿತು ಬಾನುಲಿ ತಂಡವು ಗ್ರಾಮ ವಾಸ್ತವ್ಯದ ಮೂಲಕ ಧ್ವನಿ ದಾಖಲಿಸಿ ಬಿತ್ತರಿಸಲಿದೆ. ಗ್ರಾಮದ ಹಿರಿಯ ವೈದ್ಯರಾದ ಡಾ. ಬಾಲಕೃಷ್ಣ ಆಳ್ವ, ಪಂಚಾಯತ್ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ, ಅಧ್ಯಕ್ಷೆ ಶುಭಾ ಪಿ ಶೆಟ್ಟಿ ಮುಂತಾದವರು ಸಂದರ್ಶನ ನೀಡಿದ್ದಾರೆ.
ಈ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಹಣಾ ಅಕಾರಿ ಡಾ. ಸದಾನಂದ ಪೆರ್ಲ ಪ್ರಸ್ತುತ ಪಡಿಸಲಿದ್ದಾರೆ ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ.