ಪೇಪರ್ ಏಜೆಂಟ್ ಮನೆಗೆ ಕಲ್ಲೆಸೆತ
Update: 2016-03-29 18:58 GMT
ಉಳ್ಳಾಲ, ಮಾ.29: ಸ್ಥಳೀಯ ಪೇಪರ್ ಏಜೆಂಟ್ ಪವಿತ್ರ ಕುಮಾರ್ ಗಟ್ಟಿ ಎಂಬವರ ಮನೆಗೆ ದುಷ್ಕರ್ಮಿಗಳು ಕಲ್ಲೆಸೆದು ಕಿಟಕಿ ಗಾಜಿಗೆ ಹಾನಿಗೈದಿರುವ ಘಟನೆ ಪಂಡಿತ್ ಹೌಸ್ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.
ಸೋಮವಾರ ತಡರಾತ್ರಿ ಮನೆಮಂದಿ ಮಲಗಿದ್ದ ಸಂದರ್ಭ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಬೆಳಗ್ಗಿನ ವೇಳೆ ಘಟನೆ ಬೆಳಕಿಗೆ ಬಂದಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.