ಕೈಕಂಬ: ‘ಭಯೋತ್ಪಾದನೆ ವಿರುದ್ಧ ಜಿಹಾದ್’

Update: 2016-03-30 18:48 GMT

ಕೈಕಂಬ, ಮಾ.30: ಸುನ್ನಿ ಸ್ಟೂಡೆಂಟ್ ಫೆಢರೇಶನ್ ಕೈಕಂಬ ಸೆಕ್ಟರ್ ವತಿಯಿಂದ ‘ಭಯೋತ್ಪಾದನೆ ವಿರುದ್ಧ ಜಿಹಾದ್’ ಕಾರ್ಯಕ್ರಮ ಫೀರ್‌ಝಾದೆ ಅನ್ಸಾರುದ್ದೀನ್ ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು. ಕಾರ್ಯಕ್ರಮದ ದುಆದ ನೇತೃತ್ವವನ್ನು ಬದ್ರುದ್ದೀನ್ ಅಝ್‌ಹರಿ ಕಾಮಿಲ್ ಸಖಾಫಿ ವಹಿಸಿದ್ದರು. ಖಲೀಲ್ ಖಾಝಿ, ಹಯಾಝ್ ಖಾಝಿಗೆ ಧ್ವಜ ಹಸ್ತಾಂತರಿಸಿದರು. ಹಾಫಿಝ್ ಸುಫ್ಯಾನ್ ಸಖಾಫಿ ಮೂಡುಬಿದಿರೆ ಮುಖ್ಯ ಭಾಷಣ ಮಾಡಿದರು. ಶಾಫಿ ಮದನಿ ಕಂದಾವರ, ಇಸ್ಮಾಯೀಲ್ ಸಖಾಫಿ ಮಳಲಿ, ಮುಹಮ್ಮದ್ ಅಡ್ಡೂರು, ಅಬ್ದುಲ್ ಅಝೀಝ್ ಸೈಟ್ ಬಂಗ್ಲಗುಡ್ಡೆ, ರಿಯಾಝ್ ಸಅದಿ ಗುರುಪುರ, ಅಬ್ದುಲ್ ಹಮೀದ್ ವರಕ್ಕೊಡಿ, ನಜೀಬ್ ಅಹ್ಮದ್, ಸೆಲೀನಾ ಅಸ್ರು ಬಜಪೆ, ಅಬ್ದುಲ್ ಜಲೀಲ್ ಮೊಗರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News