ಕಟ್ಟೆಮಾರ್ ನಾಗರಿಕ ಸಮಿತಿಯಿಂದ ಸಚಿವ ಖಾದರ್ಗೆ ಸನ್ಮಾನ
ಉಳ್ಳಾಲ, ಮಾ.30: ರಾಜ್ಯದಲ್ಲೇ ಮಂಜನಾಡಿ ಗ್ರಾಪಂಗೆ ಉಳಿದ ಪಂಚಾ ಯತ್ಗಳಿಗಿಂತ ಹೆಚ್ಚುವರಿ ಅನುದಾನ ಮಂಜೂರಾಗಿದ್ದು, ಈ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಜನಾಡಿ-ಕಲ್ಕಟ್ಟದಲ್ಲಿ ಕಟ್ಟೆಮಾರ್ ನಾಗರಿಕ ಸಮಿತಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮತನಾಡಿದರು.
ಎಲ್ಲ ಗ್ರಾಪಂಗೆ ತಲಾ 75 ಲಕ್ಷ ರೂ. ಅನುದಾನ ಮಂಜೂರಾಗಿದ್ದರೆ, ಮಂಜನಾಡಿ ಗ್ರಾಪಂಗೆ 1.5 ಕೋ.ರೂ. ಮಂಜೂರುಗೊಳಿಸಲಾಗಿದೆ ಎಂದವರು ತಿಳಿಸಿದರು.
ಫಕೀರ್ ಸಾಹೇಬ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿಪಂ ಸದಸ್ಯ ರಶೀದಾ ಬಾನು ಮಲಾರ್ ಮತ್ತು ತಾಪಂ ಸದಸ್ಯೆ ಸುರೇಖಾ ಚಂದ್ರ ಹಾಸ್ರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ತಾಪಂ ಮಾಜಿ ಸದಸ್ಯ ಮುಸ್ತಫಾ ಹರೇಕಳ, ಮಂಜನಾಡಿ ಗ್ರಾಪಂ ಸದಸ್ಯ ಎ.ಎಂ.ಕುಂಞಿಬಾವ ಹಾಜಿ, ಮೊಯ್ದಿನ್ ಕುಂಞಿ, ಇಲ್ಯಾಸ್ ಅನ್ಸಾರ್ ನಗರ, ಅಬ್ದುಲ್ ಖಾದರ್ ಕಲ್ಕಟ್ಟ, ಅಬ್ಬಾಸ್ ಮದ್ಪಾಡಿ, ಕಟ್ಟೆಮಾರ್ ನಾಗರಿಕ ಸಮಿತಿಯ ಅಧ್ಯಕ್ಷ ಮೋನು ಕೆ.ಎಂ., ಉಪಾಧ್ಯಕ್ಷರಾದ ಮೊಯ್ದಿನ್ ಕುಂಞಿ ಬಾವು, ಮುತ್ತಲಿಬ್ ಬಳಗುಡ್ಡೆ, ಜೊತೆ ಕಾರ್ಯದರ್ಶಿಗಳಾದ ಕೆ.ಎಂ.ಹಸನ್, ಶ್ರೀನಿವಾಸ್ ಆಳ್ವ, ಕೋಶಾಧಿಕಾರಿ ಹರೀಶ್ಕೆ., ಸದಸ್ಯರಾದ ಝಕರಿಯ ಕಟ್ಟೆಮಾರ್, ಗಂಗಾಧರ್ ಆಳ್ವ ಕಟ್ಟೆಮಾರ್, ಆನಂದ್ ಕೆ., ಮೋಹನ್, ಅಶ್ರಫ್ ಕಟ್ಟೆ ಉಪಸ್ಥಿತರಿದರು. ಕಾರ್ಯದರ್ಶಿ ಫೆಲಿಕ್ಸ್ ಡಿಸೋಜ ಸ್ವಾಗತಿಸಿದರು. ಫಿಲಿಪ್ ಡಿಸೋಜ ವಂದಿಸಿದರು.