ಸ್ಪ್ರಿಂಕ್ಲರ್ ಸೆಟ್ಗೆ ಅರ್ಜಿ ಆಹ್ವಾನ
Update: 2016-03-30 18:55 GMT
ಉಡುಪಿ, ಮಾ.30: ಗಿರಿಜನ ಉಪಯೋಜನೆಗೆ ವಿಶೇಷ ಕೇಂದ್ರೀಯ ನೆರವಿನಡಿ 2014-15ನೆ ಸಾಲಿಗೆ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಅದರಲ್ಲೂ ನೀರಾವರಿ ಹೊಂದಿರುವ ಒಂದು ಹೆಕ್ಟೇರ್ ಜಮೀನುಳ್ಳ ಸಣ್ಣ ರೈತರಿಗೆ ಸ್ಪ್ರಿಂಕ್ಲರ್ ಸೆಟ್ನ್ನು ಪಡೆಯಲು ಅವಕಾಶವಿದ್ದು, ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳು ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಸಂಬಂಧಿಸಿದ ಗ್ರಾಪಂಗಳಿಂದ ಪಡೆದು ಎ.15ರೊಳಗೆ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಐಟಿಡಿಪಿ ಉಡುಪಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಬಿ ಬ್ಲಾಕ್, 2ನೆ ಮಹಡಿ ರಜತಾದ್ರಿ ಮಣಿಪಾಲ (ದೂ.ಸಂ.: 0820-2574814)ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.