ನಾಳೆಯಿಂದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

Update: 2016-03-30 18:57 GMT

ಮಂಗಳೂರು, ಮಾ.30: ರವಿಕುಮಾರ್ ಡಿ.ಬಿ.ಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಎ.1ರಿಂದ 3 ರವರೆಗೆ ಬಲ್ಲಾಳ್‌ಬಾಗ್ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಪ್ರದರ್ಶನ ಉದ್ಘಾಟಿಸುವರು. ಮಹಾಲಸಾ ಚಿತ್ರಕಲಾ ಶಾಲಾ ಪ್ರಾಚಾರ್ಯ ಪುರುಷೋತ್ತಮ ನಾಯಕ್ ಅಧ್ಯಕ್ಷತೆ ವಹಿಸುವರು. ಕಲಾವಿದ ರಾಜೇಂದ್ರ ಕೇದಿಗೆ ಅತಿಥಿಗಳಾಗಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News