ಕಾರ್ಕಳ ಪುರಸಭೆಯ ಮತ್ತೊಂದು ವಿನೂತನ ಪ್ರಯೋಗ

Update: 2016-03-31 12:15 GMT

 ಕಾರ್ಕಳ : ಉಡುಪಿ ಜಿಲ್ಲೆಯ ಪ್ರಪ್ರಥಮ ಬಯೋ ಗ್ಯಾಸ್ ಘಟಕ ಕಾರ್ಕಳದಲ್ಲಿ ಪುರಸಭೆ ವ್ಯಾಪ್ತಿಯ ತೆಳ್ಳಾರು ಹತ್ತನೇ ವಾರ್ಡ್‌ನ ಶಬರಿ ಆಶ್ರಮದ ಆವರಣದಲ್ಲಿ ಈ ಘಟಕ ಸ್ಥಾಪನೆಗೊಂಡಿದ್ದು ಇದೀಗ ಉದ್ಘಾಟನೆಗೆ ಸಿದ್ದಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಡಂಪಿಂಗ್ ಯಾರ್ಡ್ ಬಳಕೆಯಲ್ಲಿದ್ದರೂ, ಮುಂದೊಂದು ದಿನ ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಬಹುವುದು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಒಂದು ಹಂತದಲ್ಲಿ ಇದು ಪ್ರಥಮ ಪ್ರಯೋಗವೆನಿಸಿದರೂ, ಮುಂದೆ ಅದೇ ದೂರದೃಷ್ಟಿಯನ್ನಿಟ್ಟುಕೊಂಡ ಕಾರ್ಕಳ ಪುರಸಭೆಯು ಕಸದಿಂದ ರಸ ಎನ್ನುವ ಪ್ರಯತ್ನಕ್ಕೆ ಈ ಬಯೋಗ್ಯಾಸ್ ಘಟಕ ಮಾದರಿಯಾಗಲಿದೆ. ಉಡುಪಿ ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಬಾರಿಗೆ ಈ ಯೋಜನೆಯನ್ನು ಕಾರ್ಕಳದಲ್ಲಿ ಅನುಷ್ಟಾನಗೊಳಿಸಲಾಗಿದೆ. ಈ ಘಟಕ ಸ್ಥಾಪನೆಗೊಂಡಿದ್ದು, ಅಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಉತ್ಪಾದನೆಯಾಗುವ ಮಾನವ ತ್ಯಾಜ್ಯ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಉತ್ಪಾದಿತ ಹಸಿ-ಒಣ ಕಸಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಉತ್ಪಾದಿತ ಗ್ಯಾಸ್ ಹಾಗೂ ವಿದ್ಯುತ್‌ಚ್ಛಕ್ತಿ ಹಾಸ್ಟೆಲ್‌ಗೆ ಬಳಕೆಯಾಗಲಿದೆ.

ಎಂಟು ಟನ್ ಘನತ್ಯಾಜ್ಯ :

ಪುರಸಭೆ ವ್ಯಾಪ್ತಿಯು 23.06 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, 93 ಕಿ.ಮೀ ಉದ್ದದ ರಸ್ತೆ ಹೊಂದಿದೆ. ಒಟ್ಟು 10,500 ಕಟ್ಟಡಗಳಿವೆ. 25800 ಜನಸಂಖ್ಯೆ ಹೊಂದಿದೆ. ದಿನವೊಂದಕ್ಕೆ ಸರಾಸರಿ 8 ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪುರಸಭೆಯು ಆರು ವಾಹನಗಳಿಂದ ಪ್ರತಿ ದಿನ ಎಲ್ಲಾ ಕಟ್ಟಡಗಳಿಂದ ವರ್ಗೀಕೃತ ಘನತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಕರಿಯಕಲ್ಲು ಪ್ರದೇಶದಲ್ಲಿನ 20.03 ಎಕ್ರೆ ಹೊಂಡಭರ್ತಿ ಜಾಗದಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ತ್ಯಾಜ್ಯದ ಪ್ರಾಥಮಿಕ ಸಂಗ್ರಹಣೆಯಲ್ಲಿ ಶೇ.95ರಷ್ಟು ತ್ಯಾಜ್ಯದ ವರ್ಗೀಕರಣದಲ್ಲಿ ಶೇ.70ರಷ್ಟು ಪ್ರಗತಿ ಸಾಧಿಸಲಾಗಿದೆ. ಬಯೋಗ್ಯಾಸ್ ಉತ್ಪಾದನೆಯ ಹಂತಗಳು :

* ಹಸಿ ಕಸವನ್ನು ಶ್ರಡ್ಡಿಂಗ್ ಮಾಡಿಕೊಂಡು, ಬಿಸಿ ನೀರಿನೊಂದಿಗೆ ಪೂರ್ವ ವ್ಯವಸ್ಥೆಗಳು (ಪ್ರೀ-ಡೈಜೆಸ್ಟರ್) ಟ್ಯಾಂಕ್‌ಗೆ ಸೇರಿಸಿ ಶೇಕರಿಸಿಡಬೇಕು.

* ಪೂರ್ವ ವ್ಯವಸ್ಥೆ(ಪ್ರೀ-ಡೈಜೆಸ್ಟರ್)ಯಲ್ಲಿ 3-4 ದಿನಗಳವರೆಗೆ ಹಸಿ-ಕಸ ಅರೆ ಕೊಳೆಯುವ (ಸೆಮಿ ಡಿಕಂಪೋಸ್) ಆಗುತ್ತದೆ.

* ಮುಂದೆ ಇಂಟರ್ ಚಾಂಪರ್‌ಗೆ ಕಸವು ತಳ್ಳಲ್ಪಟ್ಟು ಅಲ್ಲಿ 3-4 ದಿನಗಳು ಅರೆ ಕೊಳೆಯುವ ಘಟಕಕ್ಕೆ ಬಿಡಲಾಗುತ್ತಿದೆ.

* ನಂತರ ಮುಖ್ಯ ಜೀರ್ಣಾವಸ್ಥೆ(ಮೈನ್ ಡೈಜೆಸ್ಟರ್)ಗೆ ಕಸ ತಳ್ಳಲ್ಪಟ್ಟು 24 ಗಂಟೆಗಳು ಅಲ್ಲಿ ಕಸ ಉಳಿಸಿಕೊಳ್ಳುವುದು ಈ ರೀತಿ ಮಾಡುವುದರಿಂದ (ರೀಟೈನ್) ಗ್ಯಾಸ್ ಉತ್ಪಾದನೆಯಾಗುತ್ತದೆ.

* ಸದ್ರಿ ಗ್ಯಾಸ್ ಡೈಜೆಸ್ಟರ್‌ನ ಮೇಲ್ಭಾಗದ ಸಿಲಿಂಡರ್‌ನಲ್ಲಿ ಶೇಖರಣೆಯಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುವುದು. ಹೆಚ್ಚುವರಿ ಗ್ಯಾಸನ್ನು ವಾತಾವರಣಕ್ಕೆ ಬಿಡಬಹುವುದು.

* ಫುಲ್ ಡಿ-ಕಂಪೋಸ್ ಆದ ವೆಟ್ ವೇಸ್ಟ್ ಔಟ್‌ಲೆಟ್ಲರ್ ಛೇಂಬರ್ ಮೂಲಕ ಹೊರ ಬಂದು ಸ್ಲಡ್ಜ್ ಡ್ರೈಯಿಂಗ್ ಬೆಡ್‌ನಲ್ಲಿ ಶೇಖರಣೆವಾಗುತ್ತದೆ. ಇದು ಉತ್ತಮ ಗೊಬ್ಬರವಾಗಿರುತ್ತದೆ.

 * ಹೀಗೆ ಉತ್ಪತ್ತಿಯಾದ ಗ್ಯಾಸ್‌ನಿಂದ ವಿದ್ಯುತ್ ಉತ್ಪಾದಿಸಬಹುವುದು. ದಿನ ನಿತ್ಯದ ಅಡುಗೆಗೆ ಬಿಸಿ ನೀರೊಗೆ ಬಳಸಬಹುವುದು.

* ಬೈ-ಪ್ರಾಡಕ್ಟ್ ಆಗಿ ಉತ್ಪಾದನೆ ಆದ ಕೆಸರನ್ನು ಗೊಬ್ಬರವಾಗಿ ಬಳಸಬಹುವುದು. ಹೀಗೆ ಬಯೋಗ್ಯಾಸ್ ವಿಧಾನ ಅಳವಡಿಸಿಕೊಳ್ಳುವುದರಿಂದ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಯೊಂದಿಗೆ ಉಪಯುಕ್ತ ಉತ್ಪನ್ನಗಳನ್ನು ಹೊಂದಬಹುದಾಗಿರುತ್ತದೆ.

  2014-15ನೇ ಸಾಲಿನ 13ನೇ ಹಣಕಾಸು ಮತ್ತು ರಾಜ್ಯ ಆಯ-ವ್ಯಯದ ಅನುದಾನದಲ್ಲಿ 37 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೋಳ್ಳತ್ತಿರುವ ಈ ಬಯೋಗ್ಯಾಸ್ ಘಟಕಕ್ಕೆ ಪ್ರತಿ ದಿನಕ್ಕೆ 2 ಟನ್ ತಾಜ್ಯವನ್ನು ಉಪಯೋಗಿಸಿ ಬಯೋಗ್ಯಾಸ ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ.

ಎರಡರಿಂದ ಮೂರು ಸಿಲಿಂಡರ್ :

ಪ್ರತಿ ದಿನ ಗ್ಯಾಸ್ ಉತ್ಪಾದನೆಗೊಂಡ ಎರಡರಿಂದ ಮೂರು ಸಿಲಿಂಡರ್‌ಗಳನ್ನು ಪಡೆಯಬಹುವುದಾಗಿದೆ. ಅಲ್ಲದೆ ಉಳಿದ ಗ್ಯಾಸನ್ನು ವಿದ್ಯುಚ್ಛಕ್ತಿಗೆ ಪರಿವರ್ತಿಸಿ ನಿರಂತರ ಐದು ಗಂಟೆಗಳ ಕಾಲ ಉರಿಸಬಹುವುದು. ಇದರಿಂದಗ್ಯಾಸ್ ಸಮಸ್ಯೆ ಮತ್ತು ವಿದ್ಯುತ್‌ಚ್ಛಕ್ತಿ ಸಮಸ್ಯೆ ನೀಗಿಸಬಹುವುದು.

ಬಯೋಗ್ಯಾಸ್ ಪ್ರಕ್ರಿಯೆ ಮುಗಿದ ಬಳಿಕ ಅದರಲ್ಲಿ ದೊರೆಯುವ ಲವಣ, ಖನಿಜಾಂಶದಿಂದ ಸೇರಿರುವ ತ್ಯಾಜ್ಯ ನೀರ ಮತ್ತು ಗೊಬ್ಬರವನ್ನು ಗಿಡಗಳಿಗೆ ಮತ್ತು ತೋಟಗಳಿಗೆ ಬಳಸುವುದರಿಂದ ಫಲವತ್ತಾದ ಬೆಳೆಗಳನ್ನು ಪಡೆಯಬಹುವುದು.

 ಇದು ಯೋಜನೆ ಯಶಸ್ವೀಯಾದಲ್ಲಿ ಪುರಸಭೆ ವ್ಯಾಪ್ತಿಯ ಸರಕಾರಿ ಹಾಸ್ಟೆಲ್‌ಗಳು, ವಿದ್ಯಾರ್ಥಿ ನಿಲಯಗಳಲ್ಲಿ ಇಂತಹ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ಸದ್ಯಕ್ಕೆ ಇದರ ನಿರ್ವಹಣೆಯನ್ನು ಪುರಸಭೆಯಿಂದ ಮಾಡಲಾಗುವುದು.

ರಾಯಪ್ಪ (ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ)

Writer - ಮೊಹಮ್ಮದ್ ಶರೀಫ್ ಕಾರ್ಕಳ

contributor

Editor - ಮೊಹಮ್ಮದ್ ಶರೀಫ್ ಕಾರ್ಕಳ

contributor

Similar News