ಕಡಬ : ವ್ಯಕ್ತಿ ಕಾಣೆ: ದೂರು

Update: 2016-03-31 15:00 GMT

ಕಡಬ, ಮಾ.31. ಇಲ್ಲಿನ ಸುಂಕದಕಟ್ಟೆ ಮೂಜೂರು ನಿವಾಸಿ ಅಬ್ದುಲ್ ಖಾದರ್(39) ಎಂಬವರು ಮಾ.27ರಂದು ತನ್ನಲ್ಲಿದ್ದ ಜೀಪನ್ನು ಮಾರಿ ಗೂಡ್ಸ್ ರಿಕ್ಷಾವೊಂದನ್ನು ಖರೀದಿಸುವ ನೆಪದಲ್ಲಿ 2 ಲಕ್ಷ ಹಣವನ್ನು ಹಿಡಿದುಕೊಂಡು ಉಪ್ಪಿನಂಗಡಿಗೆ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಫೌಝಿಯಾ ಎಂಬವರು ಗುರುವಾರದಂದು ಕಡಬ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದವರ ಚಹರೆ- 5.6 ಅಡಿ ಎತ್ತರವಿದ್ದು, ಬಿಳಿ ಬಣ್ಣವನ್ನು ಹೊಂದಿದ್ದಾರೆ. ಕಪ್ಪು ಪ್ಯಾಂಟ್ ಹಾಗೂ ಹಳದಿ ಬಣ್ಣದ ಶರ್ಟು ಧರಿಸಿದ್ದು, ಕಂಡವರು ಕಡಬ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News