ಮೊಬೈಲ್ ಅಂಗಡಿಯಲ್ಲಿ ಕಳ್ಳತನ

Update: 2016-03-31 18:29 GMT

 ಉಳ್ಳಾಲ, ಮಾ.31: ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು 50,000 ರೂ. ಬೆಲೆಬಾಳುವ ಮೊಬೈಲ್ ಸೆಟ್‌ಗಳನ್ನು ಕಳವುಗೈದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಿತ್ಯಾನಂದನಗರದಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ನಿತ್ಯಾನಂದ ನಗರದಲ್ಲಿರುವ ಹರೇಕಳ ನಿವಾಸಿ ಆಸೀಫ್ ಅಬ್ದುಲ್ ಎಂಬವರಿಗೆ ಸೇರಿದ ಶಾಜಿ ಕಮ್ಯುನಿಕೇಷನ್ ಅಂಗಡಿಯಲ್ಲಿ ಕಳವು ನಡೆದಿದೆ.

ಮಂಗಳವಾರ ತಡರಾತ್ರಿ ಶಟರ್ ಮುರಿದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿ ಮಾರಾಟಕ್ಕೆ ಮತ್ತು ರಿಪೇರಿಗೆಂದು ಇರಿಸಿದ್ದ ಮೊಬೈಲ್ ಸೆಟ್‌ಗಳನ್ನು ಕಳವುಗೈದಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿದ್ದು, ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News