ಎ.2: ಮರ್ಧಾಳ ಬಂಟ್ರ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಕ್ರೀಡಾಕೂಟ

Update: 2016-04-01 08:32 GMT

ಕಡಬ, ಎ.1. ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಬಂಟ್ರ ಮರ್ಧಾಳ ಇದರ ವಾರ್ಷಿಕೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಕ್ರೀಡಾಕೂಟವು ಎ.2 ರಂದು ಪೂರ್ವಾಹ್ನ 9 ರಿಂದ ಶಾಲಾ ಮೈದಾನದಲ್ಲಿ ನಡೆಯಲಿದೆ.

ಪುತ್ತೂರು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎಸ್.ಡಿ.ಎಂಸಿ. ಅಧ್ಯಕ್ಷರಾದ ಸತೀಶ್ ಟಿ. ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುಬ್ರಹ್ಮಣ್ಯ ವಲಯ ಆರ್.ಎಫ್.ಓ. ಮಂಜುನಾಥರವರು ಧ್ವಜಾರೋಹಣಗೈಯಲಿದ್ದು, ಕುಟ್ರುಪ್ಪಾಡಿ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಕೈಕುರೆಯವರು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನವೀನ್ ವೇಗಸ್, ಸೀತಾರಾಮ ಗೌಡ ಪೊಸವಳಿಕೆ, ರಾಜು ಗೌಡ, ವೆಂಕಟ್ರಮಣ ಗೌಡ ಹಾಗೂ ಮೋನಪ್ಪ ಗೌಡ ಪಂಜೋಡಿ ಆಗಮಿಸಲಿದ್ದಾರೆ.


 ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಕೈಕುರೆಯವರು ವಹಿಸಲಿದ್ದು, ಕಡಬ ಠಾಣಾ ಉಪನಿರೀಕ್ಷಕರಾದ ಉಮೇಶ್ ಉಪ್ಪಳಿಗೆಯವರು ಬಹುಮಾನ ವಿತರಿಸಲಿದ್ದಾರೆ.

ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಧ್ವಜಾರೋಹಣಗೈಯಲಿದ್ದಾರೆ. ಅತಿಥಿಗಳಾಗಿ ರೆ ಫಾ ಜೋಶಿ ವಿ.ಸಿ., ಈಶೋ ಫಿಲಿಪ್, ಅಬ್ದುಲ್ ರಹಿಮಾನ್ ಹಾಜಿ, ಮನೋಹರ್ ರೈ, ಗೋಪಾಲ ಗೌಡ ಪಂಜೋಡಿ ಹಾಗೂ ಉಮೇಶರವರು ಭಾಗವಹಿಸಲಿದ್ದಾರೆ.


 ಹಿರಿಯ ವಿದ್ಯಾರ್ಥಿ ವಿಭಾಗದಲ್ಲಿ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News