ಅಮ್ಟೂರು: ಅಕ್ರಮ ಭೂಸ್ವಾಧೀನ ತೆರವಿಗೆ ಮನವಿ

Update: 2016-04-01 18:37 GMT

ವಿಟ್ಲ, ಎ.1: ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಬಂಡಸಾಲೆ ಎಂಬಲ್ಲಿ ಅಕ್ರಮವಾಗಿ ಭೂಸ್ವಾಧೀನ ಮಾಡಿ ಕೊಂಡು ಕಿರಿದಾದ ನಿರ್ಮಿಸಲಾದ ರಸ್ತೆಯನ್ನು ವಶಪಡಿಸಿಕೊಂಡು ರಸ್ತೆಯನ್ನು ಅಭಿ ವೃದ್ಧಿಪಡಿಸುವಂತೆ ಮತ್ತು ಸೇತುವೆ ನಿರ್ಮಿಸುವಂತೆ ದ.ಕ.ಜಿಲ್ಲಾ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟಿಸ್ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಗೋಳ್ತಮಜಲು ಗ್ರಾಮದ ನಿಟಿಲಾಕ್ಷ ಸದಾಶಿವ ದೇವಸ್ಥಾನದಿಂದ ಅಮ್ಟೂರು ಗ್ರಾಮದ ಬಂಡಸಾಲೆಯವರೆಗಿನ ಸುಮಾರು 3 ಕಿ.ಮೀ. ಉದ್ದದ ಪುರಾತನ ರಸ್ತೆಯನ್ನು ಕೆಲವು ಅಕ್ರಮ ಸ್ವಾಧೀನಗಾರರು ಅಕ್ರಮಿಸಿಕೊಂಡು ರಸ್ತೆ ನಿರ್ಮಿಸಲು ಹಾಗೂ ಸೇತುವೆ ನಿರ್ಮಿಸಲು ಅಸಾಧ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News