ಹಟ್ಟಿಯಿಂದ ದನಗಳ ಕಳವು
Update: 2016-04-01 18:41 GMT
ಉಡುಪಿ, ಎ.1: ನಗರದ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಪರಿಸರದ ಎರಡು ಮನೆಗಳಿಂದ ಒಟ್ಟು ನಾಲ್ಕು ಜೆರ್ಸಿ ದನಗಳನ್ನು 4 ಮಂದಿ ಅಪರಿಚಿತರು ಟಾಟಾ ಸುಮೋ ವಾಹನದಲ್ಲಿ ತುಂಬಿಸಿ ಕಳವು ಮಾಡಿರುವುದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಮಧ್ಯರಾತ್ರಿ 12:30ರ ಸುಮಾರಿಗೆ ಬುಡ್ನಾರು ಶಾಲೆಯ ಬಳಿಯ ನಿವಾಸಿ ಟಿ.ರತ್ನಾಕರ ಶೆಟ್ಟಿ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೂರು ಜೆರ್ಸಿ ದನಗಳನ್ನು ಹಾಗೂ ಪಕ್ಕದ ಮನೆಯ ಬಿ.ಬಾಲಕೃಷ್ಣ ಶೆಟ್ಟಿ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ ಒಂದು ಜೆರ್ಸಿ ದನವನ್ನು ಅಪಹರಿಸಲಾಗಿದೆ. 4 ಜೆರ್ಸಿ ದನಗಳ ಅಂದಾಜು ವೌಲ್ಯ 1 ಲಕ್ಷ ರೂ.ಗಳೆಂದು ದೂರಿನಲ್ಲಿ ತಿಳಿಸಲಾಗಿದೆ.