‘ಲೈಫ್ ಆನ್ ವಾರಿಯರ್ಸ್‌’ ಬೊಳ್ಳಾಯಿ ತಂಡಕ್ಕೆ ಬಿಪಿಎಲ್ ಟ್ರೋಫಿ

Update: 2016-04-02 18:55 GMT

ವಿಟ್ಲ, ಎ.2: ಬೂಯಾ ಗೈಸ್ ಪಾಣೆಮಂಗಳೂರು ಇವರು ಆಲಡ್ಕ ಮೈದಾನದಲ್ಲಿ ಸಂಘಟಿಸಿದ ಬಂಟ್ವಾಳ ಪ್ರೀಮಿಯರ್ ಲೀಗ್ (ಬಿಪಿಎಲ್)-2016 ಕ್ರಿಕೆಟ್ ಟೂರ್ನಮೆಂಟ್‌ನ ಪೈನಲ್ ಹಣಾ ಹಣಿಯಲ್ಲಿ ಇಬ್ರಾಹೀಂ ನಂದಾವರ ಮಾಲಕತ್ವದ ಎಂ.ಎಂ. ಕಿಂಗ್ಸ್ ನಂದಾವರ ತಂಡವನ್ನು 6 ವಿಕೆಟ್‌ಗಳಿಂದ ಹಿಮ್ಮೆಟ್ಟಿಸಿದ ಇಕ್ಬಾಲ್ ಬೊಳ್ಳಾಯಿ ಮಾಲಕತ್ವದ ಲೈಪ್ ಆನ್ ವಾರಿಯರ್ಸ್‌ ಬೊಳ್ಳಾಯಿ ತಂಡ ಬಿಪಿಎಲ್ ಟ್ರೋಫಿ ಹಾಗೂ 60,666 ರೂ. ನಗದು ಬಹುಮಾನವನ್ನು ಒಳಗೊಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಲೈಪ್ ಆನ್ ವಾರಿಯರ್ಸ್‌ ತಂಡದ ಇಮ್ತಿಯಾಝ್ ಅಕ್ಕರಂಗಡಿ ಪೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರೆ, ಈ ತಂಡದ ಶಾಕಿರ್ ವಾಮದಪದವು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ತಂಡದ ದೀಪಕ್ ಉತ್ತಮ ದಾಳಿಗಾರರಾಗಿ ಮೂಡಿಬಂದರೆ, ಎಂ.ಎಂ. ಕಿಂಗ್ಸ್ ನಂದಾವರ ತಂಡದ ಆಟಗಾರ ನವಾಝ್ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಪಡೆದುಕೊಂಡರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಹಿಸಿದ್ದರು. ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಕ್ರೀಡಾಕೂಟವನ್ನು ಉದ್ಘಾಟಿಸಿದರು.
 

ಪಂದ್ಯಾಟದ ಪ್ರಮುಖ ಪ್ರಾಯೋಜಕ ಉದಯ ಪೈ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಲುಕ್ಮಾನ್ ಬಿ.ಸಿ.ರೋಡು, ಯೂಸುಫ್‌ಕರಂದಾಡಿ, ಪುರಸಬಾ ಸದಸ್ಯರಾದ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಹಾಜಿ ಪಿ. ಮುಹಮ್ಮದ್ ರಫೀಕ್, ಮುಹಮ್ಮದ್ ನಂದಾವರ, ಅಬ್ದುಲ್ ಹಕೀಂ ಪಾಣೆಮಂಗಳೂರು, ಪ್ರಮುಖರಾದ ಪ್ರಕಾಶ್ ಕಾರಂತ ನರಿಕೊಂಬು, ಬೇಬಿ ಕುಂದರ್, ಹಾಮದ್ ಬಾವಾ ಯಾಸೀನ್, ಹಸೈನಾರ್ ಶಾಂತಿಅಂಗಡಿ, ಸಮದ್ ಕೈಕಂಬ, ಇಕ್ಬಾಲ್ ಬೊಳ್ಳಾಯಿ, ಕಾಸಿಂ ಶಾಂತಿಅಂಗಡಿ, ಇಬ್ರಾಹೀಂ ನಂದಾವರ, ಬದ್ರುದ್ದೀನ್ ಆಲಾಡಿ, ಪಿ.ಎಂ. ಅಬ್ದುರ್ರಹ್ಮಾನ್ ಮೆಲ್ಕಾರ್, ಪಿ.ಬಿ. ಅಹ್ಮದ್ ಹಾಜಿ ಪಾಣೆಮಂಗಳೂರು, ಇರ್ಶಾದ್ ಗುಡ್ಡೆ ಅಂಗಡಿ, ರವಳನಾಥ ನಾಯಕ್, ಪ್ರಸನ್ನ ಕುಮಾರ್, ಬ್ರಿಯಾನ್ ಲಾರಾ ಮೆಲ್ಕಾರ್, ಅಬ್ದುಲ್ ಹಮೀದ್ ಮಾರ್ನಬೈಲು, ದುರ್ಗಾದಾಸ್ ಪಾಣೆಮಂಗಳೂರು, ಗಣೇಶ್ ಶೆಣೈ ಬಂಟ್ವಾಳ, ಅಬ್ದುಲ್ ಅಝೀಝ್, ಆಲಡ್ಕ, ಹಸನಬ್ಬ ಬಂಗ್ಲೆಗುಡ್ಡೆ, ಭುವನೇಶ್ ಬಂಗ್ಲೆಗುಡ್ಡೆ, ಖಲಂದರ್ ಶಾಫಿ ನಂದಾವರ ಅತಿಥಿಗಳಾಗಿ ಭಾಗವಹಿಸಿದ್ದರು. ಬೂಯಾ ಗೈಸ್ ಪ್ರಮುಖರಾದ ಶಫೀಕ್ ಉಪ್ಪುಗುಡ್ಡೆ, ಶರೀಪ್ ನಂದಾವರ, ಅಝ್ಮಲ್ ಉಪ್ಪುಗುಡ್ಡೆ, ಮುಸ್ತಪಾ ಬಂಗ್ಲೆಗುಡ್ಡೆ, ಝುಬೈರ್ ಬಂಗ್ಲೆಗುಡ್ಡೆ, ಪಾರೂಕ್ ಆಲಡ್ಕ, ಉಸ್ಮಾನ್ ಬಾಬಾ ಉಪ್ಪುಗುಡ್ಡೆ, ಇಕ್ಬಾಲ್ ಸಜಿಪ, ಹನೀಪ್ ಮೆಲ್ಕಾರ್, ಝಹೀರ್ ಬೋಗೋಡಿ, ಸಿದ್ದೀಕ್ ಉಪ್ಪುಗುಡ್ಡೆ, ಸಿದ್ದೀಕ್ ಬಂಟ್ವಾಳ ಉಪಸ್ಥಿತರಿದ್ದರು. ಬೂಯಾ ಗೈಸ್ ಪ್ರಮುಖರಾದ ಶರೀಫ್ ಬೊಗೋಡಿ ಸ್ವಾಗತಿಸಿದರು. ಶಮೀರ್ ನಂದಾವರ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಪ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News