ಮಿತ್ತಬೈಲು: ಶಾದಿಮಹಲ್ ಕಟ್ಟಡಕ್ಕೆ ಶಿಲಾನ್ಯಾಸ

Update: 2016-04-04 03:00 GMT

ವಿಟ್ಲ, ಎ. 4: ಬಿ.ಸಿ.ರೋಡು ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಅಧೀನದಲ್ಲಿ ಇಲ್ಲಿನ ಮಸೀದಿ ಸಮೀಪ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾದಿಮಹಲ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು  ನಡೆಯಿತು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಶಿಲಾನ್ಯಾಸ ನೆರವೇರಿಸಿದರು. ಮಿತ್ತಬೈಲು ಎಂಜೆಎಂ ಅಧ್ಯಕ್ಷ ಹಬೀಬುಲ್ಲಾ ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ದೇವರು ನಮಗೆ ನೀಡಿರುವ ಸಂಪತ್ತನ್ನು ಉತ್ತಮ ಹಾಗೂ ಪುಣ್ಯ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದರು. ಶಾದಿಮಹಲ್ ಕಟ್ಟಡ ನಿರ್ಮಾಣಕ್ಕೆ ಸರಕಾರ ಹಾಗೂ ನನ್ನಿಂದಾಗುವ ಉತ್ತಮ ಸಹಾಯ ನೀಡುವುದಾಗಿ ಇದೇ ವೇಳೆ ಸಚಿವರು ಭರವಸೆ ನೀಡಿದರು.

ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಎಂಜೆಎಂ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಸಹ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಚೆಯರ್‌ಮೆನ್ ಹಾಜಿ ಎಸ್.ಎಂ. ರಶೀದ್, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖಾಧಿಕಾರಿ ಉಸ್ಮಾನ್, ಇಂಜಿನಿಯರ್ ಮುಹಮ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಸದಾಶಿವ ಬಂಗೇರ, ಶಾಹುಲ್ ಹಮೀದ್ ಹಾಜಿ ಮೆಟ್ರೋ, ನೌಶಾದ್ ಹಾಜಿ ಸೂರಲ್ಪಾಡಿ, ಮನಪಾ ಮಾಜಿ ಮೇಯರ್ ಕೆ. ಅಶ್ರಫ್, ಅರಫಾ ಮಸೀದಿ ಅಧ್ಯಕ್ಷ ಮುಹಮ್ಮದ್, ಪ್ರೊಫೆಸರ್ ಕೆ.ಪಿ. ಸೂಪಿ, ಮುಹಮ್ಮದ್ ಸಾಗರ್, ಸಯ್ಯಿದ್ ಫಳ್‌ಲು ತಂಙಳ್, ಮಸೀದಿ ಪದಾಧಿಕಾರಿಗಳಾದ ಎಸ್.ಎಂ. ಮುಹಮ್ಮದ್ ಅಲಿ, ಎಸ್.ಎಚ್. ಅಬ್ದುರ್ರಹ್ಮಾನ್, ಇಬ್ರಾಹಿಂ ಬೋಗೋಡಿ, ಇಬ್ರಾಹಿಂ ಕೊಡಂಗೆ, ಎಸ್. ಅಶ್ರಫ್ ಶಾಂತಿಅಂಗಡಿ, ಹನೀಫ್ ನಂದರಬೆಟ್ಟು, ಅಬ್ದುಲ್ ಖಾದರ್ ಶಬ್ನಂ, ಸಲಾಂ ಬಿ.ಎಚ್., ಎ.ಕೆ. ಅಬ್ದುಲ್ ಹಮೀದ್ ಹಾಜಿ, ಶಾಹುಲ್ ಅದ್ದೇಡಿ, ಹಾಜಿ ಅಬ್ದುಲ್ ಹಮೀದ್, ಸಲೀಂ ಪರ್ಲಿಯಾ, ಬಿ. ಅಲಿ ಮದ್ದ, ಅಬ್ದುಲ್ ರಝಾಕ್ ಮಠ, ಅಹಮದ್ ಕುಂಞಿ, ಶಬ್ಬೀರ್ ಮಿತ್ತಬೈಲು ಮೊದಲಾದವರು ವೇದಿಕೆಯಲ್ಲಿದ್ದರು.

ಎಂಜೆಎಂ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ ಸ್ವಾಗತಿಸಿ, ವಂದಿಸಿದರು, ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News