ಕಾಸರಗೋಡು : ಜೆ ಸಿ ಬಿ ನಿಯಂತ್ರಣ ತಪ್ಪಿ ಕೆರೆಗೆ ಮಗುಚಿ ವಿದ್ಯಾರ್ಥಿ ಮೃತ, ಚಾಲಕ ಗಂಭೀರ ಗಾಯ
ಕಾಸರಗೋಡು : ಜೆ ಸಿ ಬಿ ನಿಯಂತ್ರಣ ತಪ್ಪಿ ಕೆರೆಗೆ ಮಗುಚಿ ವಿದ್ಯಾರ್ಥಿ ಮೃತಪಟ್ಟು, ಚಾಲಕ ಗಂಭೀರ ಗಾಯಗೊಂಡ ಘಟನೆ ಪೆರಿಯ ಸಮೀಪ ಸೋಮವಾರ ಸಂಜೆ ನಡೆದಿದೆ. ಮೃತಪಟ್ಟ ವನನ್ನು ಹಾಸನದ ಮಾಧವ - ಲಕ್ಷ್ಮಿ ದಂಪತಿ ಪುತ್ರ ಸಚಿನ್ (15) ಎಂದು ಗುರುತಿಸಲಾಗಿದೆ. ಚಾಲಕ ಸಂಜಯ್ (26) ಗಾಯಗೊಂಡಿದ್ದು , ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ವ್ಯಕ್ತಿಯೋರ್ವರ ಸ್ಥಳದಲ್ಲಿ ಮಣ್ಣು ಅಗೆಯುತ್ತಿದ್ದಾಗ ದುರಂತ ನಡೆದಿದೆ .
ಜೆ ಸಿ ಬಿ ನಿಯಂತ್ರನ ತಪ್ಪಿ ಕೆರೆಗೆ ಉರುಳಿ ಬಿದ್ದಿದ್ದು , ಸಿಲುಕಿದ್ದ ಇಬ್ಬರನ್ನು ಸ್ಥಳೀಯರು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಸಚಿನ್ ಮ್ರತಪಟ್ಟಿದ್ದನು. ಶಾಲಾ ಪರೀಕ್ಷೆ ಕಳೆದು ಕೆಲ ದಿನಗಳ ಹಿಂದೆಯಷ್ಟೇ ಸಂಬಂಧಿಕನಾದ ಬೇಕಲ ಕುನಿಯ ದ ಸಂಜಯ್ ಮನೆಗೆ ಸಚಿನ್ ಬಂದಿದ್ದು, ಜೆ ಸಿ ಬಿ ಯಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದನು .
ಮ್ರತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.