ಕಾಸರಗೋಡು : ಜೆ ಸಿ ಬಿ ನಿಯಂತ್ರಣ ತಪ್ಪಿ ಕೆರೆಗೆ ಮಗುಚಿ ವಿದ್ಯಾರ್ಥಿ ಮೃತ, ಚಾಲಕ ಗಂಭೀರ ಗಾಯ

Update: 2016-04-04 13:50 GMT

ಕಾಸರಗೋಡು :  ಜೆ ಸಿ ಬಿ ನಿಯಂತ್ರಣ ತಪ್ಪಿ ಕೆರೆಗೆ ಮಗುಚಿ ವಿದ್ಯಾರ್ಥಿ ಮೃತಪಟ್ಟು, ಚಾಲಕ ಗಂಭೀರ ಗಾಯಗೊಂಡ ಘಟನೆ  ಪೆರಿಯ ಸಮೀಪ   ಸೋಮವಾರ ಸಂಜೆ ನಡೆದಿದೆ. ಮೃತಪಟ್ಟ ವನನ್ನು  ಹಾಸನದ  ಮಾಧವ - ಲಕ್ಷ್ಮಿ  ದಂಪತಿ ಪುತ್ರ ಸಚಿನ್ (15) ಎಂದು ಗುರುತಿಸಲಾಗಿದೆ. ಚಾಲಕ ಸಂಜಯ್ (26) ಗಾಯಗೊಂಡಿದ್ದು , ಮಂಗಳೂರು  ಖಾಸಗಿ  ಆಸ್ಪತ್ರೆಗೆ  ದಾಖಲಿಸಲಾಗಿದೆ. 
ಖಾಸಗಿ ವ್ಯಕ್ತಿಯೋರ್ವರ ಸ್ಥಳದಲ್ಲಿ  ಮಣ್ಣು ಅಗೆಯುತ್ತಿದ್ದಾಗ  ದುರಂತ ನಡೆದಿದೆ . 
ಜೆ ಸಿ ಬಿ  ನಿಯಂತ್ರನ  ತಪ್ಪಿ   ಕೆರೆಗೆ ಉರುಳಿ ಬಿದ್ದಿದ್ದು ,  ಸಿಲುಕಿದ್ದ  ಇಬ್ಬರನ್ನು ಸ್ಥಳೀಯರು ಮೇಲಕ್ಕೆತ್ತಿ  ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ  ಸಚಿನ್ ಮ್ರತಪಟ್ಟಿದ್ದನು.  ಶಾಲಾ ಪರೀಕ್ಷೆ ಕಳೆದು ಕೆಲ  ದಿನಗಳ ಹಿಂದೆಯಷ್ಟೇ    ಸಂಬಂಧಿಕನಾದ ಬೇಕಲ ಕುನಿಯ ದ   ಸಂಜಯ್ ಮನೆಗೆ ಸಚಿನ್ ಬಂದಿದ್ದು, ಜೆ ಸಿ ಬಿ ಯಲ್ಲಿ ಸಹಾಯಕನಾಗಿ  ಕೆಲಸ ನಿರ್ವಹಿಸುತ್ತಿದ್ದನು . 
ಮ್ರತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. 
ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News