ಕಾಸರಗೋಡು : ಎಡರಂಗ ಉದುಮ ಕ್ಷೇತ್ರದಿಂದ ಕಣಕ್ಕಿಳಿದ ಕೆ. ಸುಧಾಕರನ್

Update: 2016-04-05 12:07 GMT

ಕಾಸರಗೋಡು : ಎಡರಂಗದ ಭದ್ರಕೋಟೆಯಾದ ಉದುಮ ಕ್ಷೇತ್ರದಿಂದ ಕಣ್ಣೂರು ಮಾಜಿ ಸಂಸದ ಹಾಗೂ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಕೆ. ಸುಧಾಕರನ್ ರನ್ನು  ಕಣಕ್ಕಿಸಲಾಗಿದ್ದು, ಮಂಗಳವಾರ ಉದುಮಕ್ಕೆ ತಲುಪಿದ ಸುಧಾಕರನ್ ರವರು  ಪ್ರಚಾರಕ್ಕೆ ದುಮುಕಿದ್ದಾರೆ.
ಬೆಳಿಗ್ಗೆ ಕಣ್ಣೂರಿನಿಂದ ಉದುಮಕ್ಕೆ ತಲುಪಿದ ಸುಧಾಕರನ್ ರವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತ ನೀಡಿದರು.
ಕಳೆದ 25 ವರ್ಷಗಳಿಂದ ಸಿಪಿಎಂ ನ ಭದ್ರಕೋಟೆಯಾಗಿ ಯಾಗಿರುವ ಉದುಮ ಕ್ಷೇತ್ರವನ್ನು ಗೆಲ್ಲಬೇಕೆಂಬ ಪಣ ತೊಟ್ಟಿರುವ ಕಾಂಗ್ರೆಸ್ ಈ ಬಾರಿ ಪ್ರಬಲ ನಾಯಕ ಕೆ . ಸುಧಾಕರನ್ ರವರನ್ನು ಕಣಕ್ಕಿಳಿಸಿದೆ.
ಕೇರಳದ ಮಾಜಿ ಸಚಿವರಾಗಿರುವ ಸುಧಾಕರನ್ ರವರು ಈ ಹಿಂದೆ ಕಣ್ಣೂರಿನಿಂದ ಲೋಕಸಭೆಗೆ ಆಯ್ಕೆ ಯಾಗಿದ್ದರು. 
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಸಿ .ಕೆ ಶ್ರೀಧರನ್, ಪಿ. ಗಂಗಾಧರನ್ ನಾಯರ್ ,  ಕೆ . ನೀಲಕ೦ಟನ್,  ಮೊದಲಾದವರು ಬರಮಾಡಿಕೊಂಡರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News