ಸುಳ್ಯ: ಮನೆಗೆ ಮರಬಿದ್ದು ಅಪಾರ ನಷ್ಟ

Update: 2016-04-05 12:47 GMT

ಸುಳ್ಯ: ಮಂಗಳವಾರ ಸಂಜೆ ಸುರಿದ ಮೊದಲ ಮಳೆಗೆ ಸುಳ್ಯದಲ್ಲಿ ಹಾನಿ ಸಂಭವಿಸಿದೆ.
  ಸುಳ್ಯದ ನಾಗಪಟ್ಟಣ ಎಂಬಲ್ಲಿ ರವಿ ಎಂಬವರ ಬಾಡಿಗೆ ಮನೆಗೆ ಗಾಳಿ ಮಳೆಗೆ ತೆಂಗಿನ ಮರವೊಂದು ಮುರಿದು ಬಿತ್ತು. ಮನೆಗೆ ಹಾನಿಯಾಗಿದ್ದು, ಮನೆಯೊಳಗಿದ್ದ ರವಿ ಅವರ ಪತ್ನಿ ವಿಮಲಾ ಹಾಗು ಪುತ್ರಿ ರಕ್ಷಿತಾ ಅಪಾಯದಿಂದ ಪಾರಾಗಿದ್ದಾರೆ. ಇದೇ ಮರ ಪಕ್ಕದ ಮನೆಗೂ ತಾಗಿ ಹಾನಿ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News