ಮುಂಡಗೋಡ : ಎಲ್ಲರೂ ಭೇಷ ಎನ್ನುವಂತೆ ಕೆಲಸಮಾಡುವುದಾಗಿ ಪ.ಪಂ ನೂತನ ಅಧ್ಯಕ್ಷ - ರಫೀಕ ಇನಾಮದಾರ

Update: 2016-04-05 15:07 GMT

  ಅವರು ಸೋಮವಾರ ಮೊದಲ ದಿನದ ಕರ್ತವ್ಯ ಆರಂಭಿಸುವ ಪೂರ್ವದಲ್ಲಿ ತಾವು ಕಾರ್ಯನಿರ್ವಹಿಸುವ ಅಧ್ಯಕ್ಷ ಕೋಣೆಗೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು. ಪಟ್ಟಣ ಪಂಚಾಯತಕ್ಕೆ ಸಂಬಂದ ಪಡುವ ಕಾರ್ಯಗಳನ್ನು ಅತಿ ಶೀಘ್ರಗತಿಯಲ್ಲಿ ಮಾಡುವುದಾಗಿ ಹೇಳಿದ ಅವರು ಪ.ಪಂ ಕಾರ್ಯಾಲಯಕ್ಕೆ ಬರುವ ಜನರ ಸಮಸ್ಯಗಳನ್ನು ಮುತುವರ್ಜಿ ವಹಿಸಿ ಮಾಡುವುದಾಗಿ ಹೇಳಿದರು. ಕುಡಿಯುವ ನೀರಿನ ಸಂಬಂದ ಪಟ್ಟಣದಲ್ಲಿ ವಿಷೇಶ ಕಾಳಜಿ ವಹಿಸುವುದಾಗಿ ಹೇಳಿದರು. ಪಟ್ಟಣದ ನೈರ್ಮಲಿಕರಣಕ್ಕೆ ಅತಿಪ್ರಾಮುಖ್ಯತೆ ಕೊಡುವುದಾಗಿ ಹೇಳಿದ ಅವರು ಬಯಲು ಶೌಚ್ ಮುಕ್ತನಗರನ್ನಾಗಿ ಮಾಡುವುದಾಗಿ ಹೇಳಿದರು. ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಕುಂದು ಕೊರತೆಗಳು ಇದ್ದರೆ ತಮ್ಮ ಮೊಬೈಲ್ ಗೆ ಫೋನಾಯಿಸಿ ತೊಂದರೆ ನಿವಾರಿಸಿಕೊಳ್ಳಬಹುದು ತಾವು 24 ತಾಸು ಪಟ್ಟಣದ ಅಭಿವೃದ್ದಿಗೆ ದುಡಿಯುವುದಾಗಿ ತಿಳಿಸಿದರು
  ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಸತ್ತಾರಖಾನ ಪಠಾಣ, ಮುನಾಫ ಮಿರ್ಜಾನಕರ, ಬುಡನ್ ಶೇಖ, ನೂರಅಹ್ಮದ ಬೇಗ ಲತೀಫ ನಾಲಬಂದ, ಬಾಬುಲಾಲ ಮಕಾನದಾರ, ಪ.ಪಂ ಸದಸ್ಯರಾದ ಅಲ್ಲಿಖಾನ ಪಠಾಣ, ಫಕ್ಕಿರಪ್ಪ ಅಂಟಾಳ, ಗೋವಿಂದ ಭೋವಿ, ಸಿಂದಗಿ ಬಾಯಿ, ಶಕುಂತಲಾ ತಳವಾರ, ಮುನೇಶ ಕೊರವರ, ಸಂಜು ಪಿಶೆ, ರಾಮಣ್ಣ ಪಾಲೆಕರ,ಯಲ್ಲಪ್ಪ ಭಜಂತ್ರಿ, ಚಿದಾನಂದ ಹರಿಜನ, ಹನಮಂತಪ್ಪ ಅರೇಗೊಪ್ಪ ಸೇರಿದಂತೆ ಕಾಂಗ್ರೆಸ್ ಅಭಿಮಾನಿಗಳು ಹಾಗು ಮುಂತಾದ ಮುಸ್ಲಿಂ ಬಾಂದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News