ನಗದು ಸಹಿತ ಮೂವರ ಸೆರೆ

Update: 2016-04-05 18:30 GMT

ಕಾಸರಗೋಡು, ಎ.5: ಕರ್ನಾಟಕ ದಿಂದ ಕಣ್ಣೂರಿಗೆ ಸಾಗಾಟ ಮಾಡ ಲಾಗುತ್ತಿದ್ದ ದಾಖಲೆಗಳಿಲ್ಲದ 25 ಲಕ್ಷ ರೂ.ವನ್ನು ಇರಿಟ್ಟಿ ಪೊಲೀಸರು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ಮುಜಾಹಿದ್ (29), ಸಾಜಿದ್ ಯಾನೆ ಸೈಯದ್ ಕೈಸರ್ (26) ಮತ್ತು ಯಾಸರ್ ಅರಾಫತ್ (42) ಎಂದು ಗುರುತಿಸಲಾಗಿದೆ.

 ಚುನಾವಣೆಯ ಹಿನ್ನೆಲೆಯಲ್ಲಿ ಕೇರಳಕ್ಕೆ ಅಕ್ರಮವಾಗಿ ಕೋಟ್ಯಾಂತರ ರೂ. ಹರಿದು ಬರುತ್ತಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದ್ದು, ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಕೇರಳ  ಕರ್ನಾಟಕ ಗಡಿಯ ಇರಿಟ್ಟಿ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಹಣ ಸಾಗಾಟ ಕಂಡು ಬಂದಿದೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕಣ್ಣೂರಿನ ವ್ಯಕ್ತಿಯೋರ್ವರಿಗೆ ತಲುಪಿಸಲು ಇದನ್ನು ಕೊಂಡೊಯ್ಯುತ್ತಿದ್ದುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News