ಕಡಬ: ವ್ಯಕ್ತಿ ನಾಪತ್ತೆ

Update: 2016-04-05 18:33 GMT

ಮಂಗಳೂರು, ಎ.5: ಪುತ್ತೂರು ತಾಲೂ ಕಿನ ಐತ್ತೂರು ಗ್ರಾಮದ ಮುಜೂರು ಮನೆಯ ನಿವಾಸಿ ಅಬ್ದುಲ್ ಖಾದರ್ (39) ಎಂಬವರು ಮಾ. 27ರಂದು ಬೆಳಗ್ಗೆ 6:30ಕ್ಕೆ ಉಪ್ಪಿನಂಗಡಿಗೆ ಹೋಗಿ ಬರುವುದಾಗಿ ತನ್ನ ಪತ್ನಿಗೆ ತಿಳಿಸಿ ಹೋದ ವರು ವಾಪಸ್ ಮನೆಗೆ ಬಂದಿಲ್ಲ ಎಂದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಇವರ ಮೈಬಣ್ಣ-ಬಿಳಿ, ಮೈಕಟ್ಟು- ದಪ್ಪ, ಧರಿಸಿದ ಬಟ್ಟೆ- ಕಪ್ಪುಬಣ್ಣದ ಪ್ಯಾಂಟ್ ಮತ್ತು ಅರ್ಧತೋಳಿನ ಹಳದಿ ಹೂ ಇರುವ ಕಪ್ಪುಬಣ್ಣದ ಶರ್ಟ್ ಧರಿಸಿದ್ದಾರೆ. ಈ ಚಹರೆಯ ವ್ಯಕ್ತಿ ಎಲ್ಲಾದರೂ ಕಂಡಲ್ಲಿ ಕಡಬ ಪೊಲೀಸ್ ಠಾಣೆ (ದೂ:08251-260044/ 8251230500)ಗೆ ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News