ಉಳ್ಳಾಲ: ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ
Update: 2016-04-05 18:34 GMT
ಉಳ್ಳಾಲ, ಎ.5: ವಿದ್ಯುತ್ ದರವನ್ನು ಏರಿಕೆ ಮಾಡಿರು ವುದನ್ನು ಖಂಡಿಸಿ ಎಸ್ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ತೊಕ್ಕೊಟ್ಟು ಬಸ್ ನಿಲ್ದಾಣದ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು. ಎಸ್ಡಿಪಿಐ ಮುಖಂಡರಾದ ಅಶ್ರಫ್ ಮಂಚಿ, ಲತೀಫ್ ಕೋಡಿಜಾಲ್, ಸುಲೈಮಾನ್ ಉಸ್ತಾದ್, ರವೂಫ್ ಉಳ್ಳಾಲ್, ಆಸಿಫ್ ಪಜೀರ್, ಬಶೀರ್ ಹರೇಕಳ, ಶಾಕಿರ್ ಮೊಂಟೆಪದವು, ಅಬ್ದುರ್ರಹ್ಮಾನ್ ಎಸ್.ಎನ್., ನೌಶಾದ್ ಕಲ್ಕಟ್ಟ, ಅಬ್ದುಲ್ ಖಾದರ್ ಅಮ್ಮೆಮ್ಮಾರ್, ಹಾರಿಸ್ ಮಲಾರ್, ಸಾಮಾಜಿಕ ಕಾರ್ಯಕರ್ತ ಮಧು ಜೀವನ್ ಡಿಸೋಜ, ಉಪಸ್ಥಿತರಿದ್ದರು.