ಬಜ್ಪೆ: ಇಂದಿನಿಂದ ಧಾರ್ಮಿಕ ಪ್ರವಚನ
Update: 2016-04-05 18:41 GMT
ಬಜ್ಪೆ, ಎ.5: ಕರ್ನಾಟಕ ರಾಜ್ಯ ಸುನ್ನಿ ಫೆಡರೇಶನ್ ಹಾಗೂ ಸುನ್ನಿ ಯುವಜನ ಸಂಘದ ವತಿಯಿಂದ ಆಧ್ಯಾತ್ಮಿಕ ಸಂಗಮ ಹಾಗೂ 4ದಿವಸಗಳ ಧಾರ್ಮಿಕ ಮತ ಪ್ರಭಾಷಣ, ಅನುಸ್ಮರಣಾ ಸಂಗಮ, ಜಲಾಲಿಯ್ಯ: ರಾತೀಬ್ ಮಜ್ಲಿಸ್ ಕಾರ್ಯಕ್ರಮ ಎ.6ರಿಂದ 9ರವರೆಗೆ ಮಗ್ರಿಬ್ ನಮಾಝ್ ಬಳಿಕ ಬಜ್ಪೆ ಬಣಕಲ್ ಬಾವ ಕಾಂಪೌಂಡ್ ಜುಮಾ ಮಸೀದಿ ಬಳಿ ನಡೆಯಲಿದೆ. ಎ.6ರಂದು ಅಲ್ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್, 7ರಂದು ಸಲಾಹುದ್ದೀನ್ ಸಖಾಫಿ ಮಾಡನ್ನೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. 8ರಂದು ಅನುಸ್ಮರಣಾ ಪ್ರಭಾಷಣವನ್ನು ರಫೀಕ್ ಸಅದಿ ದೇಲಂಪಾಡಿ, ದುಆ ನೇತೃತ್ವವನ್ನು ಅಸ್ಸೈಯದ್ ಮುಹ ಮ್ಮದ್ ಅಶ್ರಫ್ ತಂಙಳ್ ಆರೂರು ಮಂಞಪಾರ ವಹಿಸಲಿದ್ದಾರೆ. ಜಲಾಲಿಯ್ಯ ನೇತೃತ್ವವನ್ನು ಅಸ್ಸೈಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನಿರ್ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.