ಇಂದಿನ ಕಾರ್ಯಕ್ರಮ

Update: 2016-04-05 18:49 GMT

ಬೆಳ್ಳಿಹಬ್ಬ ಮಹೋತ್ಸವ: ಉಡುಪಿಯ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಬೆಳ್ಳಿಹಬ್ಬ ಮಹೋತ್ಸವದಲ್ಲಿ ಸಂಸ್ಥಾಪಕರ ದಿನಾಚರಣೆ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ಯುಪಿಎಂಸಿ ಕಾಲೇಜಿನ ಆವರಣ, ಕುಂಜಿಬೆಟ್ಟು ಉಡುಪಿ.
ವಾರ್ಷಿಕೋತ್ಸವ: ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತ ಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಪುರಭವನ, ಅಜ್ಜರಕಾಡು ಉಡುಪಿ.

ಸಂಸ್ಥಾಪಕರ ದಿನಾಚರಣೆ: ಉಡುಪಿ ಎಂಜಿಎಂ ಕಾಲೇಜಿನ 67ನೆ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆ.ಬೆಳಗ್ಗೆ 10ಕ್ಕೆ ಸಂಸ್ಥಾಪಕರ ದಿನಾಚರಣೆ, ಅಪರಾಹ್ನ 2:30ಕ್ಕೆ ಸ್ಟುಡೆಂಟ್ಸ್ ವೆಲ್ಫೇರ್ ಕೌನ್ಸಿಲ್ ದಿನಾಚರಣೆ. ಸ್ಥಳ: ಮುದ್ದಣ ಮಂಟಪ, ಎಂಜಿಎಂ ಕಾಲೇಜು ಉಡುಪಿ.

ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆಯಲ್ಲಿ ಪುರಾಣ ಡಾ.ಎಚ್.ಕೆ. ಸುರೇಶಾಚಾರ್ಯರಿಂದ ಪ್ರವಚನ, 5:30ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ವಿದ್ವಾನ್ ಕಡಿಯಾಳಿ ಶ್ರೀ ವಾದಿರಾಜಾಚಾರ್ಯರಿಂದ, ಬಳಿಕ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಹಾಗೂ ಶ್ರೀವಿಶ್ವಪ್ರಸನ್ನ ತೀರ್ಥರಿಂದ ಅನುಗ್ರಹ ಸಂದೇಶ. 7ಕ್ಕೆ ರಾಜಾಂಗಣದಲ್ಲಿ ಕರಂಬಳ್ಳಿ ಶ್ರೀವೆಂಕಟರಮಣ ಯಕ್ಷಗಾನ ಕಲಾಮಂಡಳಿ ಯಿಂದ ಯಕ್ಷಗಾನ ‘ಸುದರ್ಶನ ವಿಜಯ’. 7:30ಕ್ಕೆ ರಜತ ರಥೋತ್ಸವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News