ಬಿ.ಸಿ.ರೋಡ್ ನೂತನ ಬಸ್ ನಿಲ್ದಾಣ ಕಾಮಗಾರಿ ಸಚಿವ ರೈಯಿಂದ ಪರಿಶೀಲನೆ
ಬಂಟ್ವಾಳ: ಬಿ.ಸಿ.ರೋಡ್ನಲ್ಲಿ ಸುಮಾರು ಏಳುವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಸ್ ನಿಲ್ದಾಣದ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬುಧವಾರ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಜಿಲ್ಲಾ ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗದ ಚಂದ್ರಶೇಖರ ಎಸ್.ಆರ್., ದಿವಾಕರ ಯರಗೊಪ್ಪ, ಎಂ.ವೆಂಕಟೇಶ್, ಶರಲ್, ಗುತ್ತಿಗೆದಾರ ಪ್ರಭಾಕರ ಯೆಯ್ಯಿಡಿ, ಪುರಸಭಾ ಸದಸ್ಯರಾದ ಬಿ.ಮೋಹನ್, ಪ್ರವೀಣ್ ಬಿ., ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯ ಅಬ್ಬಾಸ್ ಅಲಿ, ಪಕ್ಷದ ಪ್ರಮುಖರಾದ ಜನಾರ್ಧನ ಚೆಂಡ್ತಿಮಾರ್, ಲುಕ್ಮಾನ್, ಶ್ರೀ ಚಂಡಿಕೇಶ್ವರಿ ದೇವಾಸ್ಥಾನದ ಪ್ರಮುಖರಾದ ಸದಾನಂದ ಮಲ್ಲಿ, ಲೋಕನಾಥ ಶೆಟ್ಟಿ, ದಾಸಪ್ಪ ರೈ, ರಾಜೇಶ್ ನಾಯಕ್, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.