ಮಿತ್ತಬೈಲು: ಶಾದಿಮಹಲ್ ಕಟ್ಟಡಕ್ಕೆ ಶಿಲಾನ್ಯಾಸ

Update: 2016-04-06 18:16 GMT

ವಿಟ್ಲ, ಎ.6: ಬಿ.ಸಿ.ರೋಡ್ ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಅಧೀನದಲ್ಲಿ ಮಸೀದಿಯ ಬಳಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾದಿಮಹಲ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಶಿಲಾನ್ಯಾಸ ನೆರ ವೇರಿಸಿದರು. ಮಿತ್ತಬೈಲು ಎಂಜೆಎಂ ಅಧ್ಯಕ್ಷ ಹಬೀಬುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾದಿಮಹಲ್ ಕಟ್ಟಡ ನಿರ್ಮಾಣಕ್ಕೆ ಸರಕಾರ ಹಾಗೂ ತನ್ನಿಂದಾಗುವ ಉತ್ತಮ ಸಹಾಯ ನೀಡುವುದಾಗಿ ಭರವಸೆ ನೀಡಿದರು. ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಮಾತನಾಡಿ, ತನ್ನ ವೈಯಕ್ತಿಕ ನೆಲೆಯಲ್ಲಿ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

 ಜಿಪಂ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಎಂಜೆಎಂ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಸಹ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖಾಧಿಕಾರಿ ಉಸ್ಮಾನ್, ಇಂಜಿನಿಯರ್ ಮುಹಮ್ಮದ್ ಭಾಗವಹಿಸಿದ್ದರು. ತಾಪಂ ಸದಸ್ಯ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಸದಾಶಿವ ಬಂಗೇರ, ಶಾಹುಲ್ ಹಮೀದ್ ಹಾಜಿ ಮೆಟ್ರೋ, ನೌಶಾದ್ ಹಾಜಿ ಸೂರಲ್ಪಾಡಿ, ಮನಪಾ ಮಾಜಿ ಮೇಯರ್ ಕೆ. ಅಶ್ರಫ್, ಅರಫಾ ಮಸೀದಿ ಅಧ್ಯಕ್ಷ ಮುಹಮ್ಮದ್, ಪ್ರೊ. ಕೆ.ಪಿ. ಸೂಫಿ, ಮುಹಮ್ಮದ್ ಸಾಗರ್, ಸೈಯದ್ ಫಳ್‌ಲು ತಂಙಳ್, ಮಸೀದಿಯ ಪದಾಧಿಕಾರಿಗಳಾದ ಎಸ್.ಎಂ. ಮುಹಮ್ಮದ್ ಅಲಿ, ಎಸ್.ಎಚ್. ಅಬ್ದುರ್ರಹ್ಮಾನ್, ಇಬ್ರಾಹೀಂ ಬೋಗೋಡಿ, ಇಬ್ರಾಹೀಂ ಕೊಡಂಗೆ, ಎಸ್. ಅಶ್ರಫ್ ಶಾಂತಿಅಂಗಡಿ, ಹನೀಫ್ ನಂದರಬೆಟ್ಟು, ಅಬ್ದುಲ್ ಖಾದರ್ ಶಬ್ನಂ, ಸಲಾಂ ಬಿ.ಎಚ್., ಎ.ಕೆ. ಅಬ್ದುಲ್ ಹಮೀದ್ ಹಾಜಿ, ಶಾಹುಲ್ ಅದ್ದೇಡಿ, ಹಾಜಿ ಅಬ್ದುಲ್ ಹಮೀದ್, ಸಲೀಂ ಪರ್ಲಿಯಾ, ಬಿ. ಅಲಿ ಮದ್ದ, ಅಬ್ದುರ್ರಝಾಕ್ ಮಠ, ಅಹ್ಮದ್ ಕುಂಞಿ, ಶಬ್ಬೀರ್ ಮಿತ್ತಬೈಲು ಭಾಗವಹಿಸಿದ್ದರು. ಎಂಜೆಎಂ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ ಸ್ವಾಗತಿಸಿ, ವಂದಿಸಿದರು, ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News