ಸವಣೂರು ಶಾಂತಿನಗರ ಪರಿಸರದ ಜನರಿಗೆ ನೀರು ಸರಬರಾಜು ಮಾಡಿ ಪ್ರಶಂಸೆಗೆ ಪಾತ್ರರಾದ SDPI ಕಾರ್ಯಕರ್ತರು

Update: 2016-04-07 05:32 GMT

ಸವಣೂರು, ಎ. 7: ಶಾಂತಿನಗರ ಪರಿಸರದಲ್ಲಿ ಒಂದು ವಾರದಿಂದ ಕುಡಿಯುವ ನೀರಿನ ಅಭಾವದಿಂದ ಜನರು ಪರದಾಡುವಾಗ ತಕ್ಷಣ ಕಾರ್ಯ ಪ್ರವರ್ತರಾದ ಎಸ್ ಡಿ.ಪಿ.ಐ ಯ ಸದಸ್ಯರು ಪರಿಸರಕ್ಕೆ ಧಾವಿಸಿ ಜನರಿಗೆ ರಾತೊ ರಾತ್ರಿ ರೋಯಲ್ ಶಾಮಿಯಾನದ ಮಾಲಕರಾದ ಶಹೀರ್ ಕಾಯರ್ಗ ಮತ್ತು ನೇಷನಲ್ ಶಾಮಿಯಾನದ ಮಾಲಕರಾದ ಮುನೀರ್  ಮತ್ತು ಸವಣೂರಿನ ಪಟ್ಟೆ ಹಸೈನಾರ್  ಇವರ ವಾಹನದ ಮೂಲಕ ಸುಮಾರು 200 ರಿಂದ  250 ಮನೆಗಳಿಗೆ ನೀರನ್ನು ಸರಬರಾಜು ಮಾಡಿ ಜನರ ಪ್ರಶಂಸೆಗೆ ಪಾತ್ರರಾದರೆಂದು ತಿಳಿದುಬಂದಿದೆ. 

ಸಹಲ್ ಕಾಂಪ್ಲೆಕ್ಸ್ ನ ಪುತ್ತುಬಾವ ಸವಣೂರು ಮತ್ತು ಇಸ್ಮಾಯಿಲ್ JCB ರವರು ನೀರು ಕೊಟ್ಟು ಸಹಕರಿಸಿದರು. ಈ ಸಂದರ್ಭದಲ್ಲಿ ಗ್ರಾಂ.ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ, ಎಂ.ಎ.ರಫೀಕ್, sdpi ವಲಯ ಅಧ್ಯಕ್ಷರಾದ ನಝೀರ್.C.A, ಕಾರ್ಯದರ್ಶಿ ರಫೀಕ್.ಪಿ, ರಫೀಕ್.ಎಂ.ಎಸ್, ಬಶೀರ್ ಕಾಯರ್ಗ, ಇಕ್ಬಾಲ್ ಕೆನರಾ, ಸಹೀರ್ ಸವಣೂರು, ಮುನೀರ್ ಮುಕ್ಕೂರು, ಲತೀಫ್ ರೋಷನ್, ರಿಯಾಝ್ ಸವಣೂರು, ಫಯಾಝ್ ಸವಣೂರು, ಕರೀಂ.S.R, ಶಬೀರ್.ಕೆ, ಅಝೀಝ್ ಸಮಾದಿ, ಸಮೀರ್ ಅತ್ತಿಕರೆ, ಬಶೀರ್ ಕೆನರಾ, ಹಸೈನಾರ್ ಪಟ್ಟೆ, ರಫೀಕ್ ಪಣೆಮಜಲ್, ಅಸ್ರಫ್ ಜನತಾ, ಇರ್ಷಾದ್ ಸರ್ವೆ, ಸಿದ್ದೀಕ್ ಅಲೆಕ್ಕಾಡಿ ಮತ್ತು ಇತರ ಕಾರ್ಯಕರ್ತರು ಸಹಕಾರ ನೀಡಿದರೆಂದು sdpi ವಲಯ ಅಧ್ಯಕ್ಷರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News