ಕಾಸರಗೋಡು: ಮೀನುಗಾರಿಕೆ ಸಂದರ್ಭ ದೋಣಿ ಮಗುಚಿ ಓರ್ವ ಮೃತ್ಯು

Update: 2016-04-07 06:08 GMT

ಕಾಸರಗೋಡು, ಎ.7 : ಮೀನುಗಾರಿಕೆ ಸಂದರ್ಭದಲ್ಲಿ ದೋಣಿ ಮಗುಚಿ ಬೆಸ್ತ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಬೇಕಲ ಪಳ್ಳಿಕೆರೆ  ಸಮುದ್ರದಲ್ಲಿ ನಡೆದಿದೆ .

ಮೃತರನ್ನು ಬಾಲನ್ (53) ಎಂದು ಗುರುತಿಸಲಾಗಿದೆ . ಅವರ ಜೊತೆಗಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ಐವರು ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ ಮರಳುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಬಿದ್ದಿದ್ದು, ಇನ್ನೊಂದು ದೋಣಿಯಲ್ಲಿ ಇದ್ದವರು ಇವರನ್ನು ರಕ್ಷಿಸಲು ಪ್ರಯತ್ನಿಸಿದ್ದು, ಬಾಲನ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.  ಈ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News