ಕಾರ್ಕಳ: ಕರ್ತವ್ಯ ನಿರತ ಸಿಬ್ಬಂದಿ ಹೃದಘಾತದಿಂದ ಮೃತ್ಯು

Update: 2016-04-07 15:16 GMT

ಕಾರ್ಕಳ : ಅಗ್ನಿಶಾಮಕದಳದಲ್ಲಿ ಕರ್ತವ್ಯ ನಿರತ ಸಿಬ್ಬಂದಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಪುತ್ತೂರು ಪಾಲ್ತಾಡಿ ನಿವಾಸಿ ಪ್ರಮುಖ ಅಗ್ನಿಶಾಮಕ ರಾಜವರ್ಮ ಜೈನ್ (52) ಮೃತಪಟ್ಟವರು. ಅಗ್ನಿಶಾಮಕದಳದಲ್ಲಿ ಸಂಜೆ 6.30ರ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಕಳೆದ ವರ್ಷಗಳಿಂದ ಕಾರ್ಕಳ ಅಗ್ನಿಶಾಮಕದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News