ಮದ್ಯ, ಮಾದಕ ವಸ್ತು ವಿರುದ್ಧದ ಛಾಯಾಚಿತ್ರ ಪ್ರದರ್ಶನ

Update: 2016-04-07 17:56 GMT

 ಕಾಸರಗೋಡು, ಎ.7: ಕಾಸರಗೋಡು ಫೋಟೊಗ್ರಾಫರ್ಸ್‌ ವೆಲ್ಫೇರ್ ಟ್ರಸ್ಟ್ ವತಿಯಿಂದ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧದ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ ನಗರದ ಹೊಸ ಬಸ್‌ನಿಲ್ದಾಣದ ಬಳಿ ನಡೆಯಿತು.

 ಕಾರ್ಯಕ್ರಮವನ್ನು ಕಾಸರಗೋಡು ಸಂಸದ ಪಿ. ಕರುಣಾಕರನ್ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಶಾಜು ವಿ.ಮಲಪ್ಪುರಂ ಪ್ರಥಮ , ಸುಜಿ ಆದಿರ ತ್ರಿಶ್ಯೂರು ದ್ವಿತೀಯ ಮತ್ತು ಸಂದೀಪ್ ಪುಷ್ಕರ್ ತೃತೀಯ ಸ್ಥಾನವನ್ನು ಗಳಿಸಿ ಅನುಕ್ರಮವಾಗಿ ರೂ.15,000, ರೂ.7,000 ಮತ್ತು ರೂ. 3,000 ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದುಕೊಂಡರು.

   ಶಾಸಕ ಎನ್.ಎ. ನೆಲ್ಲಿಕುನ್ನು ಬಹುಮಾನ ವಿತರಿಸಿದರು. ಡಿವೈಎಸ್ಪಿ ಪ್ರೇಮರಾಜನ್, ವಿನಯ ರಾಜ್ ಶೆಟ್ಟಿ , ನೂರುದ್ದೀನ್ ನಡುತೋಪಿಲ್, ವಿಜಯ್ ಶೃಂಗಾರ್, ಮುಹಮ್ಮದ್ ಹಾಶಿಂ, ಪಿ. ಮಣಿ , ಸುರೇಶ ಕಣ್ಣನ್, ಅನಿಲ್ ವಿ.ನಾಯರ್, ಶ್ರೀಧರ ಕೂಡ್ಲು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News