ಯುವ ಪತ್ರಕರ್ತ ಹೈಮದ್ ಹುಸೇನ್ ಹೃದಯಾಘಾತದಿಂದ ನಿಧನ

Update: 2016-04-08 10:19 GMT

ಮಂಗಳೂರು, ಎ.8: ಪ್ರಜಾವಾಣಿ ವರದಿಗಾರ ಹೈಮದ್ ಹುಸೇನ್ (28) ಇಂದು ಮಧ್ಯಾಹ್ನ ಹೃದಾಯಘಾತದಿಂದ ಚಾರ್ಮಾಡಿಯಲ್ಲಿ ನಿಧನರಾದರು.

ಯುಗಾದಿಯ ಪ್ರಯುಕ್ತ ಪತ್ರಿಕೆಗಳಿಗೆ ಇಂದು ರಜೆಯಿದ್ದ ಕಾರಣ ಪತ್ರಕರ್ತರೆಲ್ಲರೂ ಚಾರ್ಮಾಡಿ ಅಧ್ಯಯನ ಪ್ರವಾಸ ತೆರಳಿದ್ದರು. ಚಾರ್ಮಾಡಿಯಲ್ಲಿ ಹೈಮದ್ ಹುಸೆನ್ ಅವರಿಗೆ ಹೃದಯಾಘಾತವಾಗಿದ್ದ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ.

ಹೈಮದ್ ಹುಸೇನ್ ಅವರಿಗೆ ಇತ್ತೀಚೆಗೆ ವರ್ಗಾವಣೆಯಾಗಿದ್ದು ಕೆಲವೆ ದಿನಗಳಲ್ಲಿ ಹಾವೇರಿಯಲ್ಲಿ ಕೆಲಸಕ್ಕೆ ಹಾಜರಾಗಬೇಕಿತ್ತು. ಹೈಮದ್ ಹುಸೇನ್ ಅವರ ನಿಧನಕ್ಕೆ ಪತ್ರಕರ್ತರು , ಗಣ್ಯರು ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News