ಅಪಘಾತ: ಬೈಕ್ ಸಹಸವಾರ ಮೃತ್ಯು

Update: 2016-04-09 18:36 GMT

ಉಡುಪಿ, ಎ.9: ಇಂದ್ರಾಳಿ ರೈಲ್ವೆ ಕ್ರಾಸ್ ಬಳಿ ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಮಲ್ಪೆ ಕಲ್ಮಾಡಿಯ ಶೇಖರ ಕೋಟ್ಯಾನ್ ಎಂಬವರ ಪುತ್ರ ಪುನೀತ್ ಎಂದು ಗುರುತಿಸಲಾಗಿದೆ. ಎ.8ರಂದು ಪುನೀತ್ ತನ್ನ ಸ್ನೇಹಿತ ಯೋಗೀಶ್ ಎಂಬಾತನ ಬೈಕಿನಲ್ಲಿ ಸಹ ಸವಾರನಾಗಿ ಮಣಿಪಾಲಕ್ಕೆ ಹೋಗಿ ವಾಪಸು ಬರುವಾಗ ಕಡಿಯಾಳಿ ಕಡೆಯಿಂದ ಬಂದ ಕಾರು ಏಕಾಏಕಿ ಇಂದ್ರಾಳಿಯಲ್ಲಿ ರೈಲ್ವೆ ಸ್ಟೇಷನ್ ಕಡೆಗೆ ತಿರುಗಿದ ಪರಿಣಾಮ ಬೈಕ್‌ಗೆ ಢಿಕ್ಕಿ ಹೊಡೆಯಿತು.

  ಇದರಿಂದ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಪುನೀತ್ ಎ.9ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News